ಸ್ಯಾಂಡಲ್ ವುಡ್ ತಾರೆಯರ ಗಣಪನ ಜಪ

ಗುರುವಾರ, 24 ಆಗಸ್ಟ್ 2017 (10:23 IST)
ಬೆಂಗಳೂರು: ಗೌರಿ, ಗಣೇಶ ಹಬ್ಬ ಬಂದೇ ಬಿಡ್ತು. ಸ್ಯಾಂಡಲ್ ವುಡ್ ತಾರೆಯರು ಇದೀಗ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಕರೆ ನೀಡುತ್ತಿದ್ದಾರೆ.

 
ಗಣೇಶ ಹಬ್ಬಕ್ಕೆ ವಾರದ ಮುಂಚೆಯೇ ನಟ ಗಣೇಶ್ ದಂಪತಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ಕೂರಿಸಲು ಅಭಿಯಾನವನ್ನೇ ಆರಂಭಿಸಿದ್ದಾರೆ. ತಮ್ಮ ಟ್ವಿಟರ್ ಪೇಜ್ ನಲ್ಲಿ ಅಭಿಮಾನಿಗಳಿಗೆ, ಸಹ ನಟರಿಗೆ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ ಪರಿಸರ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಅತ್ತ ಇತ್ತೀಚೆಗಷ್ಟೇ ಮದುವೆಯಾಗಿರುವ ನಟಿ ಅಮೂಲ್ಯ ತಮ್ಮ ಮನೆಯಲ್ಲಿ ಈ ಬಾರಿ ರೈತರೊಬ್ಬರು ಕಳುಹಿಸಿಕೊಟ್ಟ ಪರಿಸರ ಸ್ನೇಹಿ ಗಣೇಶನನ್ನು ಕೂರಿಸುವ ಪ್ರತಿಜ್ಞೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳೂ ಪರಿಸರ ಕಾಪಾಡಲು ಸಲಹೆ ನೀಡಿದ್ದಾರೆ.

ನಟ ಜಗ್ಗೇಶ್ ಕೂಡಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪರಿಸರ ಸ್ನೇಹಿ ಗಣೇಶನ ಮೂರ್ತಿ  ಸಿಗುವ ಜಾಗ ಎಲ್ಲಿ ಎಂದು ವಿಳಾಸ ಸಮೇತ ಪ್ರಕಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ಜೋಡಿ ಯಶ್-ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ.. ಅಭಿಮಾನಿ ಜತೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಜಟಾಪಟಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ