ನಾವೇನೂ ಆರೋಪಿಗಳಲ್ಲ, ಸಾಮಾನ್ಯ ವಿಚಾರಣೆಗೆ ಕರೆದಿದ್ದಾರಷ್ಟೇ: ನಟಿ ಗೀತಾ, ಅಭಿಷೇಕ್ ಹೇಳಿಕೆ

ಮಂಗಳವಾರ, 22 ಸೆಪ್ಟಂಬರ್ 2020 (11:34 IST)
ಬೆಂಗಳೂರು: ಡ್ರಗ್ ಮಾಫಿಯಾ ಸಂಬಂಧ ಪಟ್ಟಂತೆ ಐಎಸ್ ಡಿ ಕನ್ನಡ ಕಿರುತೆರೆ ನಟರನ್ನು ವಿಚಾರಣೆಗೊಳಪಡಿಸುತ್ತಿದ್ದು, ವಿಚಾರಣೆಗೆ ಹಾಜರಾದ ನಟಿ ಗೀತಾ ಭಾರತಿ ಭಟ್, ಅಭಿಷೇಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.


ಐಎಸ್ ಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಗೀತಾ ‘ನಾನು ಆರೋಪಿಯಲ್ಲ. ಸಾಮಾನ್ಯ ವಿಚಾರಣೆಗಾಗಿ ಕರೆದಿದ್ದಾರಷ್ಟೇ. ನಾನು ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಯಾವ ವಿಚಾರಕ್ಕೆ ಕರೆದಿದ್ದಾರೆ ಎಂದು ನನಗೂ ಗೊತ್ತಿಲ್ಲ’ ಎಂದಿದ್ದಾರೆ. ಇನ್ನು, ನಟ ಅಭಿಷೇಕ್ ದಾಸ್ ಕೂಡಾ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ