ದರ್ಶನ್ ಸ್ಥಿತಿ ನೆನೆದು ಕಣ್ಣೀರು ಹಾಕಿದ ಗಿರೀಜಾ ಲೋಕೇಶ್

Sampriya

ಗುರುವಾರ, 25 ಜುಲೈ 2024 (15:21 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿರುವ ಬಗ್ಗೆ ಮೊದಲ ಬಾರಿ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಅವರು ಈ ಪ್ರಕರಣದಲ್ಲಿ ಜೈಲಲ್ಲಿ ಇರುವುದನ್ನು ನೆನಪಿಸಿಕೊಂಡಾಗೆಲ್ಲ, ಇದು ಕನಸಗಿರಬಾರದಾ ಅನಿಸುತ್ತದೆ ಎಂದು ಭಾವುಕರಾದರು.

ಈ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ನಾನಾಗಿದ್ದರು ಅಷ್ಟೇ. ಆದರೆ ಈ ಪ್ರಕರಣದಿಂದ ದರ್ಶನ್ ಕಷ್ಟ ಪಡುತ್ತಿರುವುದನ್ನು ನೋಡುತ್ತಿದ್ದರೆ ತುಂಬಾನೇ ನೋವಾಗುತ್ತದೆ. ನಾನು ದರ್ಶನ್ ಅವರನ್ನು 14 ವಯಸ್ಸಿನವನಿಂದ ನೋಡುತ್ತಿದ್ದೇನೆ. ತುಂಬಾ ಮುಗ್ದ ಹುಡುಗ. ಕಷ್ಟ ಬಿದ್ದು ಮೇಲೆ ಬಂದ ಹುಡುಗ. ತಂದೆ ಸತ್ತ ಸಮಯದಲ್ಲಿ ಎಷ್ಟು ಕಷ್ಟ ಬಿದ್ದಿದ್ದೆ ಅಂದರೆ ಹೇಳಲಾಗದು ಎಂದು ಕಣ್ಣೀರು ಹಾಕಿದರು.

ಈ ಘಟನೆಯಿಂದ ದರ್ಶನ್ ಆದಷ್ಟು ಬೇಗ ಹೊರಬರಲೆಂದು ಆಶಿಸುತ್ತೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ