ಗುಂಟೂರು ಖಾರಂ ಸಿನಿಮಾದಲ್ಲಿ ಮಹೇಶ್ ಬಾಬು ಒಬ್ಬರೇ! ಉಳಿದವರು ಲೆಕ್ಕಕ್ಕೆ ಮಾತ್ರ!

Krishnaveni K

ಶುಕ್ರವಾರ, 12 ಜನವರಿ 2024 (13:15 IST)
ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ನಾಯಕರಾಗಿರುವ ಗುಂಟೂರು ಖಾರಂ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ಇದ್ದಾರೆ. ಆದರೆ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರದ್ದು ಒನ್ ಮ್ಯಾನ್ ಶೋ. ಉಳಿದವರೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಿದ್ದಾರೆ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು.

ಮಹೇಶ್ ಬಾಬುಗೆ ಆಕ್ಷನ್ ಸಿನಿಮಾಗಳು ಹೊಸದೇನಲ್ಲ. ಇಲ್ಲಿ ಮತ್ತೊಂದು ಕತೆಯೊಂದಿಗೆ ಬಂದಿದ್ದಾರೆ ಎನ್ನುವುದಷ್ಟೇ ವಿಶೇಷ. ಅದನ್ನು ಹೊರತುಪಡಿಸಿದರೆ ಅದೇ ಆಕ್ಷನ್, ಟಪ್ಪಾಂಗುಚ್ಚಿ ಡ್ಯಾನ್ಸ್ ಒಟ್ಟಿನಲ್ಲಿ ಮಿರ್ಚಿ ಮಸಾಲಾ ಸಿನಿಮಾ ಎಂದಿದ್ದಾರೆ ಪ್ರೇಕ್ಷಕರು.

ಸಿನಿಮಾದಲ್ಲಿ ಗಮನ ಸೆಳೆಯುವ ಅಂಶವೆಂದರೆ ಮಹೇಶ್ ಬಾಬು ಎಂಟ್ರಿ, ತಮನ್ ಮ್ಯೂಸಿಕ್. ಮಹೇಶ್ ಬಾಬು ಸಿನಿಮಾ ಎಂದು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದ ಪ್ರೇಕ್ಷಕರಿಗೆ ಇದು ನಿರೀಕ್ಷಿತ ಮಟ್ಟದಲ್ಲಿ ಖುಷಿಕೊಟ್ಟಿಲ್ಲ ಎಂದು ಟ್ವಿಟರ್ ವಿಮರ್ಶೆಗಳಿಂದ ತಿಳಿದುಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ