ಅತ್ತಿಗೆ ವಿಜಯಲಕ್ಷ್ಮಿಯನ್ನು ದಿನಕರ್ ತೂಗುದೀಪ್ ಎಷ್ಟು ಕೇರ್ ಮಾಡ್ತಾರೆ

Sampriya

ಸೋಮವಾರ, 30 ಸೆಪ್ಟಂಬರ್ 2024 (18:32 IST)
Photo Courtesy X
ಬಳ್ಳಾರಿ: ಪತಿ ದರ್ಶನ್‌ರನ್ನು ಭೇಟಿಯಾಗಲು ಬಳ್ಳಾರಿ ಜೈಲಿಗೆ ಆರನೇ ಭಾರೀ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ. ಇನ್ನು ವಿಜಯಲಕ್ಷ್ಮೀ ಸಾಥ್ ನೀಡಲು ಭಾಮೈದ ದಿನಕರ್ ತೂಗುದೀಪ್ ಅವರು ಬರುತ್ತಾರೆ. ಇಂದು ಕೂಡಾ ದರ್ಶನ್ ಭೇಟಿಗೆ ವಿಜಯಲಕ್ಷ್ಮೀ ಜತೆ ದಿನಕರ್ ತೂಗುದೀಪ್, ನಟ ಧನ್ವೀರ್ ಆಗಮಿಸಿದ್ದಾರೆ.

ಇನ್ನೂ ಭೇಟಿಯ ನಂತರ ಹೊರಬರುವಾಗ ದಿನಕರ್ ತೂಗುದೀಪ್ ಅತ್ತಿಗೆಯನ್ನು ತುಂಬಾನೇ ಕೇರ್ ಮಾಡುತ್ತಾರೆ. ಇಂದು ಕೂಡಾ ದರ್ಶನ್‌ಗೆ ತಂದಿದ್ದ ಎರಡು ಬ್ಯಾಗ್‌ ತಪಾಸಣೆ ವೇಳೆ ಜೋರು ಮಳೆ ಸುರಿದಿದೆ. ಈ  ವಿಜಯಲಕ್ಷ್ಮಿ ನೆನೆಯುತ್ತಿರುವುದನ್ನು ನೋಡಿ  ಅತ್ತಿಗೆಗೆ ಕೊಡೆ ಹಿಡಿದು ಸಂದರ್ಶಕರ ಕೊಠಡಿಯತ್ತ ದಿನಕರ್ ತೆರಳಿದ್ದಾರೆ.

ವಾಪಾಸ್ಸಾಗುವ ವೇಳೆಯೂ ಮಾಧ್ಯಮದವರು ಸುತ್ತುವರೆದಾಗ ಕಾರಿನ ಬಾಗಿಲು ತೆರೆದು ಕೂರಿಸಿದ್ದಾರೆ. ಅದಲ್ಲದೆ ಕ್ಯಾಮಾರಾದಿಂದ ಅತ್ತಿಗೆಯನ್ನು ಕಾಪಾಡುತ್ತಾ ಕಾರಿನತ್ತ ಬರುತ್ತಿರುವುದನ್ನು ನೋಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ