ಕೊನೆಯ ಕ್ಷಣದಲ್ಲೂ ಅವನ ಮುಖ ನೋಡಲು ಸಾಧ್ಯವಾಗದೇ ಹೋಯಿತು: ಜಗ್ಗೇಶ್ ಬೇಸರ

ಬುಧವಾರ, 8 ಏಪ್ರಿಲ್ 2020 (09:33 IST)
ಬೆಂಗಳೂರು: ಮಾರಕ ಕೊರೋನಾದಿಂದಾಗಿ ಬುಲೆಟ್ ಪ್ರಕಾಶ್ ಅಂತ್ಯ ಕ್ರಿಯೆಯಲ್ಲಿ ಅವರ ಮೆಚ್ಚಿನ ಸ್ನೇಹಿತರು, ಅಭಿಮಾನಿಗಳಿಗೆ ಪಾಲ್ಗೊಳ್ಳಲು ಸಾಧ‍್ಯವಾಗದೇ ಹೋಯಿತು. ಈ ದುಃಖ ಅವರ ಸ್ನೇಹಿತರಲ್ಲಿ  ಮನೆ ಮಾಡಿದೆ.


ಮೊನ್ನೆ ನಿಧನರಾಗಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಂತಿಮ ಕ್ರಿಯೆ ನಿನ್ನೆ ಹೆಬ್ಬಾಳದ ಚಿತಾಗಾರದಲ್ಲಿ ನೆರವೇರಿತು. ಆದರೆ ಈ ಸಂದರ್ಭದಲ್ಲಿ ತಮಗೆ ಪಾಲ್ಗೊಳ್ಳಲು ಸಾಧ‍್ಯವಾಗಲಿಲ್ಲ ಎಂದು ನವರಸನಾಯಕ ಜಗ್ಗೇಶ್ ತೀವ್ರ ಬೇಸರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ನನ್ನ ಕಲಾಬಂಧು ಸ್ನೇಹಿತನ ಸಾವಿಗೂ ಹೋಗಲಾರದ ಸ್ಥಿತಿಗೆ ಕೊರೋನಾ ತಂದುಬಿಟ್ಟಿದೆ. ಈ ಸಂದರ್ಭದಲ್ಲಿ ಅವನ ನೆನಪು ಎಂದೂ ನೆನಪಿರಲಿದೆ ಎಂದು ಜಗ್ಗೇಶ್ ಬೇಸರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ