ಸರಿಗಮಪ ಅಂಧ ಸೋದರಿಯರ ಮನೆ ರೆಡಿ! ಗೃಹಪ್ರವೇಶಕ್ಕೆ ಜಗ್ಗೇಶ್ ದಂಪತಿ

ಮಂಗಳವಾರ, 25 ಫೆಬ್ರವರಿ 2020 (09:17 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋನಲ್ಲಿ ಹಾಡಿದ್ದ ತುಮಕೂರಿನ ಅಂಧ ಸಹೋದರಿಯರಾದ ರತ್ಮಮ್ಮ ಮತ್ತು ಮಂಜಮ್ಮ ಅವರಿಗೆ ಕೊಟ್ಟ ಮಾತಿನಂತೆ ನಟ ಜಗ್ಗೇಶ್ ಕೊನೆಗೂ ಮನೆ ರಿಪೇರಿ ಮಾಡಿಸಿಕೊಟ್ಟಿದ್ದಾರೆ.


ತುಮಕೂರಿನ ಅಭಿಮಾನಿಗಳ ಸಂಘದ ಮೂಲಕ ರಿಪೇರಿ ಮಾಡಿಸಿಕೊಟ್ಟ  ಜಗ್ಗೇಶ್ ಇದೀಗ ಕೀಲಿ ಕೈ ಹಸ್ತಾಂತರಿಸಲು ಸ್ವತಃ ತಾವೇ ಮನೆಗೆ ಪತ್ನಿ ಸಮೇತ ಭೇಟಿ ನೀಡಲಿದ್ದಾರೆ.

ಮಾರ್ಚ್ 12 ರಂದು ಗೃಹಪ್ರವೇಶ ಸಮಾರಂಭವಿದ್ದು, ಆ ದಿನ ಮನೆಗೆ ಭೇಟಿ ನೀಡಿ ಜಗ್ಗೇಶ್ ದಂಪತಿ ಅವಳಿ ಸಹೋದರಿಯರಿಗೆ ಮನೆ ಕೀಲಿ ಕೈ ಹಸ್ತಾಂತರಿಸಲಿದ್ದಾರೆ. ಇಂತಹದ್ದೊಂದು ಪುಣ್ಯ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ