ಸಹಾಯ ಮಾಡಿ ಎಂದ ಕಾರ್ಮಿಕನಿಗೆ ನವರಸನಾಯಕ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಗುರುವಾರ, 9 ಏಪ್ರಿಲ್ 2020 (09:28 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಅತೀ ಹೆಚ್ಚು ತೊಂದರೆಗೀಡಾದವರು ದಿನಗೂಲಿ ಕಾರ್ಮಿಕರು. ಹಲವು ದಾನಿಗಳು ಇವರ ನಿತ್ಯದ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿದ್ದರೂ ಎಲ್ಲರಿಗೂ ಅದು ತಲುಪುತ್ತಿಲ್ಲ.

 

ಜೀ ಕನ್ನಡ ವಾಹಿನಿಯಲ್ಲಿ ಸೆಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ನವರಸನಾಯಕ ಜಗ್ಗೇಶ್ ಗೆ ಟ್ವೀಟ್ ಮಾಡಿ ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ. ಇದಕ್ಕೆ ಜಗ್ಗೇಶ್ ಕೊಟ್ಟ ಉತ್ತರವೇನು ಗೊತ್ತಾ?

ಟ್ವಿಟರ್ ನಲ್ಲಿ ಜಗ್ಗೇಶ್ ಗೆ ನೇರವಾಗಿ ಸಹಾಯ ಕೇಳಿದ ಯುವಕ ಕೆಲಸವಿಲ್ಲದೇ ನನಗೆ ಎರಡು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಲು ಕಷ್ಟವಾಗಿದೆ. ದಯವಿಟ್ಟು ಸಹಾಯ ಮಾಡಿ ಎಂದಿದ್ದಾನೆ. ಇದಕ್ಕೆ ಉತ್ತರಿಸಿರುವ ಜಗ್ಗೇಶ್ ಮಾದೇಗೌಡರನ್ನು ಭೇಟಿಯಾಗು ಎಂದಿದ್ದಾರಲ್ಲದೆ, ನಿನ್ನ ಸಹಾಯಕ್ಕೆ ನಾನು ಇರುವೆ, ಧೈರ್ಯಗೆಡಬೇಡ ಎಂದು ಧೈರ್ಯ ತುಂಬಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ