ಜಗ್ಗೇಶ್ ಪುತ್ರನಿಗೆ ಚಾಕುವಿನಿಂದ ಇರಿತ

ಸೋಮವಾರ, 14 ಆಗಸ್ಟ್ 2017 (09:24 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಇಂದು ಬೆಳಿಗ್ಗೆ ನಡೆದಿರುವುದಾಗಿ ವರದಿಯಾಗಿದೆ.


 
ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಆರ್ ಟಿ ನಗರ ಬಳಿ ದುಷ್ಕರ್ಮಿಗಳು ಜಗ್ಗೇಶ್ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವತಃ ಜಗ್ಗೇಶ್ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.

ಯಾವುದೇ ದ್ವೇಷದ ಹಿನ್ನಲೆಯಲ್ಲಿ  ದುಷ್ಕರ್ಮಿಗಳು ದಾಳಿ ನಡೆಸಿಲ್ಲ. ಟ್ರಾಫಿಕ್ ಸಂದರ್ಭದಲ್ಲಿ ನಡೆದ ಚಿಕ್ಕ ಕಿರಿ ಕಿರಿಯಿಂದಾಗಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆಂದು ಜಗ್ಗೇಶ್ ತಿಳಿಸಿದ್ದಾರೆ. ಈ ಬಗ್ಗೆ ಆರ್ ಟಿ ನಗರ ಪೊಲೀಸರಿಗೆ ದೂರು  ನೀಡಲಾಗಿದೆ. ಗುರುರಾಜ್ ಎಡ ತೊಡೆ ಮೇಲೆ ಗಾಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ.. ಸಿದ್ಧಗಂಗಾ ಶ್ರೀಗಳ ಎದುರು ಕೂತ ಅಮಿತ್ ಶಾ ಕುಳಿತ ಭಂಗಿ ವಿವಾದದಲ್ಲಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ