ಪ್ರಮಾಣ ವಚನಕ್ಕೆ ಮುನ್ನ ದೆಹಲಿಯಲ್ಲೂ ರಾಯರ ಸ್ಮರಣೆ ಮಾಡಿದ ನವರಸನಾಯಕ ಜಗ್ಗೇಶ್

ಶುಕ್ರವಾರ, 8 ಜುಲೈ 2022 (10:15 IST)
ಬೆಂಗಳೂರು: ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿ ನಾಯಕ, ನಟ ಜಗ್ಗೇಶ್ ದೆಹಲಿಗೆ ತೆರಳಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಗುರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ಜಗ್ಗೇಶ್‍ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದರು.

ಇದೀಗ ಪ್ರಮಾಣ ವಚನ ಸ್ವೀಕರಿಸುವ ಮೊದಲೂ ಪತ್ನಿ ಪರಿಮಳಾ ಜೊತೆ ಜಗ್ಗೇಶ್ ಅಲ್ಲಿಯೂ ರಾಯರ ಸ್ಮರಣೆ ಮಾಡಿದ್ದಾರೆ. ದೆಹಲಿಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ