ಅಂಬಿ ಅಂತಿಮ ದರ್ಶನ ಪಡೆಯಲು ಬಂದ ಬಹುಭಾಷಾ ನಟಿ ಜಯಪ್ರದಾ

ಸೋಮವಾರ, 26 ನವೆಂಬರ್ 2018 (12:21 IST)
ಬೆಂಗಳೂರು : ಅಂಬಿ ನಿಧನರಾದ ಹಿನ್ನಲೆಯಲ್ಲಿ ಈಗಾಗಲೇ ಚಿತ್ರರಂಗದ ಹಲವು ಗಣ್ಯರು ಕಂಠೀರವ ಸ್ಟೇಡಿಯಂಗೆ ಆಗಮಿಸಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.


ಇದೀಗ ಅಂಬರೀಶ್ ಅಂತಿಮ ದರ್ಶನಕ್ಕೆ ಬಹುಭಾಷಾ ನಟಿ ಜಯಪ್ರದಾ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ಈಗಾಗಲೇ ನಟರಾದ ಜಗ್ಗೇಶ್, ಸಾಧು ಕೋಕಿಲಾ, ರವಿಶಂಕರ್, ನಟಿ ಜಯಮಾಲಾ, ಅರ್ಜುನ್ ಸರ್ಜಾ ಕುಟುಂಬ, ತೆಲುಗು ನಟ ಸುಮನ್, ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ಭಾ.ಮಾ ಹರೀಶ್ ಸೇರಿದಂತೆ ಹಲವಾರು ಗಣ್ಯರು ಕಂಠೀರವ ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದಾರೆ.


ಅಂಬರೀಶ್ ಪಾರ್ಥಿವ ಶರೀರ ಸೇನಾ ಹೆಲಿಕಾಪ್ಟರ್ ಮೂಲಕ ಈಗಾಲೇ ಬೆಂಗಳೂರಿನ ಹೆಚ್ ಎಎಲ್ ತಲುಪಿದ್ದು, ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ