ಕನ್ನಡದಲ್ಲಿ ಮಾತನಾಡಿ, ಕುಂದಾಪುರದ ನಂಟು ಬಿಚ್ಚಿಟ್ಟ ಜ್ಯೂ. ಎನ್ಟಿಆರ್

ಮಂಗಳವಾರ, 4 ಏಪ್ರಿಲ್ 2017 (12:31 IST)
ತೆಲುಗಿನ ದಂತಕತೆ ಎನ್`ಟಿಆರ್ ಮೊಮ್ಮಗ ಜ್ಯೂ. ಎನ್ಟಿರ್ ಬಗ್ಗೆ ಬಹುಶಃ ಕನ್ನಡಿಗರಿಗೂ ಚಿರ ಪರಿಚಿತ. ಆಂಧ್ರಪ್ರದೇಶದಲ್ಲಷ್ಟೆ ಅಲ್ಲ, ಕರ್ನಾಟಕದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಕರ್ನಾಟಕದ ಜೊತೆ ಸಿನಿಮಾ ಮೂಲಕ ನಂಟು ಹೊಂದಿದ್ದ ಎನ್ಟಿಆರ್`ಗೆ ರಕ್ತ ಸಂಬಂಧದ ನಂಟೂ ಇದೆ ಎನ್ನುವ ವಿಷಯವನ್ನ ಅವರೇ ಹೇಳಿಕೊಂಡಿದ್ದಾರೆ.

ಐಫಾ ಚಿತ್ರೋತ್ಸವದ ಸಂದರ್ಭ ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ ನೀಡಲು ಸ್ಟೆಜ್`ಗೆ ಬಂದ ಎನ್ಟಿಆರ್, ಈ ವಿಷಯವನ್ನ ಹೇಳಿಕೊಂಡಿದ್ದಾರೆ. ನನ್ನ ತಾಯಿ ಸಹ ಕುಂದಾಪುರದವರೇ, ನಮ್ಮ ಅಪ್ಪನ ಕುಟುಂಬದ ರೀತಿ ನನ್ನ ಅಮ್ಮನದ್ದೂ ದೊಡ್ಡ ಕುಟುಂಬ ಎಂದು ಎನ್ಟಿಆರ್ ಹೇಳಿದ್ದಾರೆ.ಕನ್ನಡ ಮತ್ತು ಕರ್ನಾಟಕ ನನ್ನ ಬದುಕಿನಲ್ಲಿ ಬೆಸೆದುಕೊಂಡಿದೆ ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ತಾವೇ ಹಾಡಿದ್ದ ಗೆಳೆಯ ಗೆಳೆಯ ಹಾಡನ್ನ ಹಾಡಿ ನೆರೆದಿದ್ದವರನ್ನ ರಂಜಿಸಿದರು.

ಎನ್`ಟಿಆರ್ ಪುತ್ರ ಹರಿಕೃಷ್ಣ ಮತ್ತು ಶಾಲಿನಿಯ ಪುತ್ರ ಜ್ಯೂ. ಎನ್ಟಿಆರ್. ಶಾಲಿನಿ ಚಿಕ್ಕಂದಿನಲ್ಲೇ ಅವರ ಕುಟುಂಬ ಹೈದರಾಬಾದ್`ಗೆ ತೆರಳಿ ಅಲ್ಲಿಯೇ ನೆಲೆಯೂರಿತ್ತು. ಹರಿಕೃಷ್ಣ, ಶಾಲಿನಿಯವರನ್ನ 2ನೇ ಮದುವೆಯಾಗಿದ್ದರು.

 

ವೆಬ್ದುನಿಯಾವನ್ನು ಓದಿ