ರಿಲೀಸ್ ಗೆ ಮುನ್ನ ಟೆಂಪಲ್ ರನ್ ಮಾಡಿದ ಕೆಜಿಎಫ್ 2 ಬಳಗ

ಮಂಗಳವಾರ, 1 ಫೆಬ್ರವರಿ 2022 (16:48 IST)
ಉಡುಪಿ: ಕೆಜಿಎಫ್ 2 ಸಿನಿಮಾ ರಿಲೀಸ್ ಗೂ ಮೊದಲು ಚಿತ್ರತಂಡ ಟೆಂಪಲ್ ರನ್ ನಡೆಸಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಆನೆಗುಡ್ಡ ಗಣಪತಿ ದೇವಾಲಯ ದರ್ಶನ ಮಾಡಿ ವಿಶೇಷ ಪೂಜೆ ನಡೆಸಿದೆ.

ನಿನ್ನೆಯಿಂದ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್ ಮತ್ತು ಸೇರಿದಂತೆ ಕೆಜಿಎಫ್ ಬಳಗ ಕುಂದಾಪುರದಲ್ಲಿ ಬೀಡುಬಿಟ್ಟಿದೆ.

ನಿನ್ನೆ ತಮ್ಮ ಬಾಡಿಗಾರ್ಡ್ ಬರ್ತ್ ಡೇ ಆಚರಿಸಿಕೊಂಡಿದ್ದ ಯಶ್, ಇಂದು ತಮ್ಮ ತಂಡದ ಜೊತೆಗೆ ದೇವಾಲಯ ದರ್ಶನ ಮಾಡಿದ್ದಾರೆ. ಏಪ್ರಿಲ್ 14 ರಂದು ಕೆಜಿಎಫ್ 2 ರಿಲೀಸ್ ಗೆ ದಿನಾಂಗ ನಿಗದಿಯಾಗಿದ್ದು, ಪ್ರಚಾರಕ್ಕೆ ಮೊದಲು ದೇವರ ಆಶೀರ್ವಾದ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ