ಬೈಕ್ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಗೆ ಕಿಚ್ಚ ಸುದೀಪ್ ಕಂಬನಿ

ಸೋಮವಾರ, 29 ಜುಲೈ 2019 (09:30 IST)
ಬೆಂಗಳೂರು: ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ ತುಮಕೂರಿನ ಪುನೀತ್ ಆರ್ಯ ಎಂಬವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.


ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಪುನೀತ್ ಮೃತಪಟ್ಟಿದ್ದರು. ಸದಾ ಕಿಚ್ಚ ಸುದೀಪ್ ಸಿನಿಮಾ ಬಿಡುಗಡೆ ಇರಲಿ, ಯಾವುದೇ ಕಾರ್ಯಕ್ರಮವಿರಲಿ ಜತೆಯಲ್ಲೇ ಇರುತ್ತಿದ್ದ ಪುನೀತ್ ಆರ್ಯ ನಿಧನಕ್ಕೆ ಕಿಚ್ಚನ ಅಭಿಮಾನಿಗಳ ಬಳಗವೇ ಕಂಬನಿ ಮಿಡಿದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ‘ಈ ಅದ್ಭುತ ವ್ಯಕ್ತಿ ಈಗ ಜತೆಗಿಲ್ಲ ಎಂದು ಹೇಳಲು ದುಃಖವಾಗುತ್ತದೆ. ನನಗೆ ಆತ ಕೇವಲ ಅಭಿಮಾನಿಯಲ್ಲ, ಹಲವು ವರ್ಷಗಳಿಂದ ಸಹೋದರನಂತಿದ್ದ.  ತುಂಬಾ ದುಃಖವಾಗುತ್ತಿದೆ. ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ