ಸಂಚಾರಿ ವಿಜಯ್ ಪ್ರಾಣ ಉಳಿಸಲು ಇಷ್ಟೆಲ್ಲಾ ಮಾಡಿದ್ದಾರಂತೆ ಕಿಚ್ಚ ಸುದೀಪ್

ಮಂಗಳವಾರ, 15 ಜೂನ್ 2021 (10:17 IST)
ಬೆಂಗಳೂರು: ನಟ ಸಂಚಾರಿ ವಿಜಯ್ ಗೆ ರಸ್ತೆ ಅಪಘಾತವಾಗಿದೆ ಎಂದ ತಕ್ಷಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹಾಯ ಮಾಡಿದ್ದರು. ಅಷ್ಟಕ್ಕೂ ಸುದೀಪ್ ಯಾವ ರೀತಿ ನೆರವಾಗಿದ್ದರು ಗೊತ್ತಾ?


ಮೂಲಗಳ ಪ್ರಕಾರ ಅಪಘಾತದ ಸುದ್ದಿ ತಿಳಿದ ತಕ್ಷಣ ವಿಜಯ್ ರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದು ಸುದೀಪ್. ಖುದ್ದಾಗಿ ತಾವೇ ಅಪೋಲೋ ಆಸ್ಪತ್ರೆಯ ಸಿಇಒ ಬಳಿ ಮಾತನಾಡಿ ವಿಜಯ್ ಗೆ ಕೂಡಲೇ ಶಸ್ತ್ರಚಿಕಿತ್ಸೆಯಾಗುವಂತೆ ನೋಡಿಕೊಂಡಿದ್ದರು. ಇದಕ್ಕಾಗಿ ಆಸ್ಪತ್ರೆಗೆ ಸುಮಾರು 12 ಲಕ್ಷ ರೂ. ಬಿಲ್ ಪಾವತಿಸಿದ್ದರು.

ಬಳಿಕ ತಮ್ಮದೇ ಕಾರು ಕಳುಹಿಸಿ ಅಪೋಲೋ ಆಸ್ಪತ್ರೆಗೆ ನ್ಯೂರೋ ಸರ್ಜನ್ ರನ್ನು ಕರೆಸಿದ್ದರು ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ. ಆದರೆ ಸುದೀಪ್ ತಾವು ಮಾಡಿದ ಸಹಾಯವನ್ನು ಎಲ್ಲೂ ಬಾಯ್ಬಿಟ್ಟಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ