ಹಿರಿಯ ಜೀವಗಳ ರಕ್ಷಣೆಗೆ ನಿಂತ ಕಿಚ್ಚ ಸುದೀಪ್

ಮಂಗಳವಾರ, 4 ಆಗಸ್ಟ್ 2020 (11:55 IST)
ಬೆಂಗಳೂರು: ಇತ್ತೀಚೆಗೆ ಕಿಚ್ಚ ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಾ ಸುದ್ದಿಯಾಗುತ್ತಿದ್ದಾರೆ. ಇದೀಗ ಅಂತಹದ್ದೇ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕಿಚ್ಚ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮುಖಾಂತರ ತುಮಕೂರಿನ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದ ಹಿರಿಯ ನಾಗರಿಕರಾದ ರಾಧಮ್ಮ ಮತ್ತು ನಾಗರಾಜು ಹಾಗೂ ಅವರ ವಿಕಲಚೇತ ಪುತ್ರನ ಬಾಳಿಗೆ ಬೆಳಕಾಗಿದ್ದಾರೆ.

ಈ ಹಿರಿಯ ನಾಗರಿಕರ ಮನೆಗೆ ವಿದ್ಯುತ್, ಇತರ ಮೂಲಸೌಕರ್ಯ ಒದಗಿಸಿಕೊಟ್ಟ ಕಿಚ್ಚನ ತಂಡ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ