ಹುಟ್ಟುಹಬ್ಬಕ್ಕೆ ಕೋಣ ಬಲಿಕೊಟ್ಟವರ ವಿರುದ್ಧ ನಟ ಸುದೀಪ್ ಗರಂ

ಶುಕ್ರವಾರ, 3 ಸೆಪ್ಟಂಬರ್ 2021 (10:10 IST)
ಬೆಂಗಳೂರು: ನಿನ್ನೆ ಅಭಿನಯ ಚಕ್ರವರ್ತಿ ಹುಟ್ಟುಹಬ್ಬದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಅವರ ಅಭಿಮಾನಿಗಳ ಗುಂಪೊಂದು ಕೋಣ ಬಲಿ ಕೊಟ್ಟು ಆಚರಣೆ ಮಾಡಿದೆ. ಇದೀಗ ವಿವಾದಕ್ಕೆ ಕಾರಣವಾಗಿದೆ.


ಈ ಸಂಬಂಧ 25 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸುದೀಪ್ ಅವರ ಬೃಹತ್ ಕಟೌಟ್ ಮುಂದೆ ಕೋಣ ಬಲಿ ಕೊಟ್ಟು, ಅದರ ರಕ್ತವನ್ನು ಕಟೌಟ್ ಗೆ ಚೆಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಘಟನೆ ತಿಳಿದ ಸ್ಥಳೀಯ ಪೊಲೀಸರು ಪ್ರಾಣಿ ಹಿಂಸೆ ಉಲ್ಲಂಘನಾ ಕಾಯ್ದೆಯಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇನ್ನು, ಈ ವಿಚಾರ ತಿಳಿದ ಕಿಚ್ಚ ಸುದೀಪ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಭಿಮಾನದ ಹೆಸರಿನಲ್ಲಿ ಪ್ರಾಣಿ ಹಿಂಸೆ ಮಾಡುವುದು ಸರಿಯಲ್ಲ. ಹುಟ್ಟುಹಬ್ಬಕ್ಕೆ ಪ್ರೀತಿಯ ಒಂದು ಶುಭಾಶಯ ಸಾಕು. ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ