ಬುರ್ಜ್ ಖಲೀಫಾದಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ನೆನೆಸಿಕೊಂಡ ಕಿಚ್ಚ ಸುದೀಪ್

ಸೋಮವಾರ, 1 ಫೆಬ್ರವರಿ 2021 (09:11 IST)
ಬೆಂಗಳೂರು: ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಸಿನಿಮಾ ಟೈಟಲ್ ಲೋಗೋ ಲಾಂಚ್ ಆದ ಸಂಭ್ರಮದ ಕ್ಷಣದಲ್ಲಿ ಕಿಚ್ಚ ಸುದೀಪ್, ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ.


ಲೋಗೋ ಅನಾವರಣಕ್ಕೆ ಮುನ್ನ ದುಬೈನಲ್ಲಿ ಸ್ಥಳೀಯ ಪತ್ರಕರ್ತರೊಂದಿಗೆ ಸಂವಾದ ಏರ್ಪಾಡಾಗಿತ್ತು. ಈ ವೇಳೆ ತಮ್ಮ ನೆಚ್ಚಿನ ಹಾಡು ವಿಷ್ಣುವರ್ಧನ್ ಹಾಡಿದ್ದ ‘ತುತ್ತು ಅನ್ನ ತಿನ್ನೋಕೆ’ ಹಾಡಿ ಖುಷಿಪಟ್ಟರು. ಇನ್ನು, ದುಬೈನಲ್ಲೂ ನೂರಾರು ಜನ ‘ಕಿಚ್ಚ ಕಿಚ್ಚ’ ಎಂದು ಜೈಕಾರ ಹಾಕುವಾಗ ಭಾವುಕರಾದರು. 

ಇದಕ್ಕೂ ಮೊದಲು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾದ ಶುಭ ಗಳಿಗೆಗಾಗಿ ಕಿಚ್ಚ ಸುದೀಪ್ ಗೆ ಕನ್ನಡ ಮಾತ್ರವಲ್ಲದೆ, ವಿವಿಧ ಭಾಷೆಗಳ ಸೂಪರ್ ಸ್ಟಾರ್ ನಟ-ನಟಿಯರು ಶುಭ ಕೋರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ