ಕಿಚ್ಚ ಸುದೀಪ್ ಟ್ವೀಟ್ ನಿಂದ ದರ್ಶನ್-ಕಿಚ್ಚನ ಅಭಿಮಾನಿಗಳ ವಾರ್ ನಿಲ್ಲುತ್ತಾ?

ಬುಧವಾರ, 18 ಸೆಪ್ಟಂಬರ್ 2019 (09:43 IST)
ಬೆಂಗಳೂರು: ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದರ ಬಗ್ಗೆ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಕೆಸರೆರಚಾಟಕ್ಕೆ ಸುದೀಪ್ ಮಾಡಿದ ಒಂದು ಸುದೀರ್ಘ ಟ್ವೀಟ್ ಕೊನೆ ಹಾಡುತ್ತಾ?

 

ನಿನ್ನೆ ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿರುವ ಸುದೀಪ್ ಈ ವಾರ್ ಇಲ್ಲಿಗೇ ಕೊನೆಯಾಗಬೇಕು. ಸುಮ್ಮನಿರುವುದರಿಂದ ನಾವು ಯಾರೂ ಸಣ್ಣವರಾಗಲ್ಲ. ನಾನು ಯಾವುದೇ ನಟನ ಮೇಲೆ ಆರೋಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದರ ಜತೆಗೆ ನಾನು ಯಾರಿಗೂ ಎಚ್ಚರಿಕೆ ಕೊಟ್ಟಿಲ್ಲ ಮತ್ತು ಕೊಡೋದೂ ಇಲ್ಲ. ಒಂದು ವೇಳೆ ಮಾತಿನಿಂದಲೇ ಯುದ್ಧ ಗೆಲ್ಲಬಹುದಾಗಿದ್ದರೆ ಜಗತ್ತಿನಲ್ಲಿ ಇಂದು ಹಲವು ಜನ ಆಳುವವರಿರುತ್ತಿದ್ದರು. ನಾನು ಮಾನವೀಯತೆಯ ದಾರಿಯಲ್ಲಿ ಹೋಗಲು ಬಯಸುತ್ತೇನೆ ಎಂದು ಕಿಚ್ಚ ಹೇಳಿಕೊಂಡಿದ್ದಾರೆ. ಈ ಟ್ವೀಟ್ ನೋಡಿರುವ ಕಿಚ್ಚನ ಅಭಿಮಾನಿಗಳು ಇದು ನಿಮ್ಮ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ