ಪವರ್ ಸ್ಟಾರ್ ಅಪ್ಪು ಸಮಾಧಿಗೆ ಇಂದು ಮತ್ತಷ್ಟು ಜನರ ಆಗಮನ

ಸೋಮವಾರ, 29 ನವೆಂಬರ್ 2021 (09:50 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನವಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಬರುವವರು ಸಂಖ್ಯೆಯೂ ಹೆಚ್ಚಾಗಿದೆ.

ಇಂದು ತಮ್ಮ ಮೆಚ್ಚಿನ ನಟನ ಸಾವಿಗೆ ಒಂದು ತಿಂಗಳು ಕಳೆದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ರಕ್ತದಾನ, ಪುತ್ಥಳಿ ಅನಾವರಣ ಮುಂತಾದ ಸಮಾಜಮುಖೀ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ.

ಇನ್ನು, ಅಪ್ಪು ಮಾಸಿಕ ಪುಣ್ಯಸ್ಮರಣೆ ಅಂಗವಾಗಿ ಸಮಾಧಿಗೆ ವಿಶೇಷ ಪೂಜೆ ನಡೆಯಲಿದೆ. ಇನ್ನು, ಸಮಾಧಿಗೆ ಭೇಟಿ ನೀಡಲಿರುವ ಜನರೂ ಹೆಚ್ಚಾಗಿದ್ದು, ತಮಗೆ ತೋಚಿದ ರೀತಿಯಲ್ಲಿ ಪೂಜೆ ಮಾಡಿ ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ