ಹುಚ್ಚ ವೆಂಕಟ್ ನಟ ಶಿವರಾಜ್ ಕುಮಾರ್ ಮೇಲೆ ಸಿಟ್ಟಾಗಿ ಏನು ಹೇಳಿದ್ದು ಗೊತ್ತಾ…?

ಬುಧವಾರ, 14 ಮಾರ್ಚ್ 2018 (07:19 IST)
ಬೆಂಗಳೂರು : ಒಂದಲ್ಲ ಒಂದು ಅವಾಂತರಗಳನ್ನು ಮಾಡಿ ವಿವಾದ ಸೃಷ್ಟಿಸುವ ಹುಚ್ಚ ವೆಂಕಟ್ ಇದೀಗ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್  ಮೇಲೆ ಆರೋಪ ಮಾಡಿದ್ದಾರೆ.


ಅದೇನೆಂದರೆ ಹುಚ್ಚ ವೆಂಕಟ್ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದಾಗ ಸೆಕ್ಯೂರಿಟಿ ಒಳಗೆ ಬಿಡದೆ ಆಚೆಯೇ ನಿಲ್ಲಿಸಿ ಸ್ವಲ್ಪ ಹೊತ್ತು ಕಾಯಿಸಿ ಕಳುಹಿಸಿದ್ದಾನಂತೆ. ಅಲ್ಲದೇ ಶಿವರಾಜ್ ಕುಮಾರ್ ಅವರ ಜೊತೆ ಮಾತನಾಡಲು ಅವರ ಡ್ರೈವರ್ ಗೆ ಫೋನ್ ಮಾಡಿದ್ರೆ ಆತ ‘ಶಿವಣ್ಣನಿಗೆ ನಿಮ್ಮ ನಂಬರ್ ಕೊಟ್ಟಿದ್ದೇನೆ. ಅವರೇ ಕಾಲ್ ಮಾಡ್ತಾರೆ’ ಎಂದು ಹೇಳಿದ್ದಾನಂತೆ. ಆದರೆ ಅವರು  ಫೋನ್ ಮಾಡಲಿಲ್ಲವಂತೆ. ಇದರಿಂದ ಬೇಸರಗೊಂಡ ಹುಚ್ಚ ವೆಂಕಟ್ ಅವರು,’ಶಿವಣ್ಣ ನನಗೆ ಅವಮಾನ ಮಾಡಿದ್ದಾರೆ. ನಾನು ಇನ್ನು ಮುಂದೆ ನಿಮ್ಮನ್ನ ಇಷ್ಟ ಪಡಲ್ಲ. ನನಗೆ ಒಂದು ಗ್ಲಾಸ್ ನೀರು ಕೊಡ್ಲಿಲ್ಲ ನಿಮ್ ಸೆಕ್ಯುರಿಟಿ. ಇನ್ಯಾವತ್ತೂ ನಾನು ನಿಮ್ ಮನೆ ಹತ್ರ ಬರಲ್ಲ. ಮನೆವರೆಗೆ ಯಾರಾದ್ರೂ ಬಂದ್ರೆ ಕನಿಷ್ಟ ಒಂದು ಗ್ಲಾಸ್ ನೀರು ಕೊಡೋದಕ್ಕೆ ನಿಮ್ ಸೆಕ್ಯುರಿಟಿ ಗಾರ್ಡ್ ಗೆ ಹೇಳಿ. ನೀರಿಗೆ ಬರ ಇದ್ರೆ ಈ ಹುಚ್ಚ  ವೆಂಕಟ್ ನಂಬರ್ ಗೆ ಕಾಲ್ ಮಾಡೋಕೆ ಹೇಳಿ. ಟ್ಯಾಂಕರ್ ಗಟ್ಟಲೆ ಕಳುಹಿಸ್ತಿನಿ. ಒಬ್ಬ ಅಭಿಮಾನಿಗೆ ನೀರು ಕೊಡ್ಲಿಲ್ಲ ಅಂದ್ರೆ ಏನ್ ಅರ್ಥ. ನೀವ್ ಫೋನ್ ಮಾಡಿಲ್ಲ ಅಂದ್ರೆ ಹುಚ್ಚ ವೆಂಕಟ್ ವ್ಯಾಲ್ಯೂ ಕಮ್ಮಿ ಆಗಲ್ಲ’ ಎಂದು ಇನ್ನೂ ಏನೇನೊ ಹೇಳಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.



ಇದನ್ನು ನೋಡಿದ ಶಿವರಾಜ್ ಕುಮಾರ್ ಅಭಿಮಾನಿಗಳು ಹುಚ್ಚ ವೆಂಕಟ್ ಅವರನ್ನು ತರಾಟೆಗೆ ತೆಗೆದುಕೊಂಡು ಶಿವಣ್ಣನ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಮೊದಲು ಒಪ್ಪದ ಹುಚ್ಚ ವೆಂಕಟ್ ಅವರು ಕೊನೆಗೆ ತಲೆಬಾಗಿ ಕ್ಷಮೆ ಕೆಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ