ದರ್ಶನ್, ಪವಿತ್ರಾ ಗೌಡ ಬೇರೆಯಾದರೂ ಒಂದಾದ ಇಬ್ಬರ ಶ್ವಾನಗಳು

Krishnaveni K

ಶನಿವಾರ, 31 ಆಗಸ್ಟ್ 2024 (10:30 IST)
Photo Credit: Facebook
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾದ ಬಳಿಕ ಪವಿತ್ರಾ ಗೌಡರಿಂದ ದರ್ಶನ್ ಆದಷ್ಟು ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಇಬ್ಬರೂ ದೂರವಾದರೂ ಈಗ ಇಬ್ಬರ ನಾಯಿಗಳು ಒಂದಾಗಿವೆ!

ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿದ್ದರೆ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು ಈಗ ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದಾರೆ. ಆದರೆ ಇಬ್ಬರ ನಾಯಿಗಳು ಮಾತ್ರ ಈಗ ಒಂದಾಗಿದ್ದು, ಒಂದೇ ಮನೆಯಲ್ಲಿ ಒಟ್ಟಿಗೇ ದಿನ ಕಳೆಯುತ್ತಿವೆ.

ಪವಿತ್ರಾ ಗೌಡ ಬಳಿ ಮೂರು ನಾಯಿಗಳಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಅರೆಸ್ಟ್ ಆದ ಮೇಲೆ ಅವರ ನಾಯಿಗಳು ಅನಾಥವಾಗಿದ್ದವು. ಅನ್ನ, ಆಹಾರ ಸರಿಯಾಗಿಲ್ಲದೇ ಅವುಗಳು ಸೊರಗಿ ಹೋಗಿದ್ದವು. ಹೀಗಾಗಿ ಈ ನಾಯಿಗಳನ್ನು ಸಂರಕ್ಷಿಸಲು ಪೀಪಲ್ಸ್ ಫಾರ್ ಅನುಮಲ್ಸ್ ಸಂಸ್ಥೆಯವರು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಅದರಂತೆ ಪವಿತ್ರಾ ಮನೆಯಲ್ಲಿದ್ದ ಎರಡು ನಾಯಿಗಳನ್ನು ರಕ್ಷಿಸಿ ದರ್ಶನ್ ಮನೆಗೆ ಕಳುಹಿಸಲಾಗಿದೆ. ಈಗ ಅಲ್ಲಿ ದರ್ಶನ್ ಮನೆಯ ನಾಯಿಗಳ ಜೊತೆ ಅವುಗಳೂ ಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ. ಮೂರು ನಾಯಿಗಳ ಪೈಕಿ ಒಂದನ್ನು ಪವಿತ್ರಾ ಸ್ನೇಹಿತರೊಬ್ಬರು ತೆಗೆದುಕೊಂಡು ಹೋಗಿದ್ದಾರೆಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾದ ಬಳಿಕ ಪವಿತ್ರಾ ಗೌಡರಿಂದ ದರ್ಶನ್ ಆದಷ್ಟು ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಇಬ್ಬರೂ ದೂರವಾದರೂ ಈಗ ಇಬ್ಬರ ನಾಯಿಗಳು ಒಂದಾಗಿವೆ!
 
ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿದ್ದರೆ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು ಈಗ ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದಾರೆ. ಆದರೆ ಇಬ್ಬರ ನಾಯಿಗಳು ಮಾತ್ರ ಈಗ ಒಂದಾಗಿದ್ದು, ಒಂದೇ ಮನೆಯಲ್ಲಿ ಒಟ್ಟಿಗೇ ದಿನ ಕಳೆಯುತ್ತಿವೆ.

ಪವಿತ್ರಾ ಗೌಡ ಬಳಿ ಮೂರು ನಾಯಿಗಳಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಅರೆಸ್ಟ್ ಆದ ಮೇಲೆ ಅವರ ನಾಯಿಗಳು ಅನಾಥವಾಗಿದ್ದವು. ಅನ್ನ, ಆಹಾರ ಸರಿಯಾಗಿಲ್ಲದೇ ಅವುಗಳು ಸೊರಗಿ ಹೋಗಿದ್ದವು. ಹೀಗಾಗಿ ಈ ನಾಯಿಗಳನ್ನು ಸಂರಕ್ಷಿಸಲು ಪೀಪಲ್ಸ್ ಫಾರ್ ಅನುಮಲ್ಸ್ ಸಂಸ್ಥೆಯವರು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
 
ಅದರಂತೆ ಪವಿತ್ರಾ ಮನೆಯಲ್ಲಿದ್ದ ಎರಡು ನಾಯಿಗಳನ್ನು ರಕ್ಷಿಸಿ ದರ್ಶನ್ ಮನೆಗೆ ಕಳುಹಿಸಲಾಗಿದೆ. ಈಗ ಅಲ್ಲಿ ದರ್ಶನ್ ಮನೆಯ ನಾಯಿಗಳ ಜೊತೆ ಅವುಗಳೂ ಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ. ಮೂರು ನಾಯಿಗಳ ಪೈಕಿ ಒಂದನ್ನು ಪವಿತ್ರಾ ಸ್ನೇಹಿತರೊಬ್ಬರು ತೆಗೆದುಕೊಂಡು ಹೋಗಿದ್ದಾರೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ