ನಿನ್ ಹೊಟ್ಟೆ ತಣ್ಣಗಿರ್ಲಪ್ಪಾ ಎಂದು ರಾಕಿಂಗ್ ಸ್ಟಾರ್ ಯಶ್ ಗೆ ಆಶೀರ್ವದಿಸಿದ ಜನ

ಗುರುವಾರ, 6 ಜೂನ್ 2019 (09:20 IST)
ಬೆಂಗಳೂರು: ಯಶೋಮಾರ್ಗ ಸಂಸ್ಥೆ ಮೂಲಕ ರಾಕಿಂಗ್ ಸ್ಟಾರ್ ಯಶ್ ಇದೀಗ ಉತ್ತರ ಕರ್ನಾಟಕದ ಹಲವು ಗ್ರಾಮಗಳ ನೀರಿನ ಬವಣೆ ನೀಗಿಸಲು ಮುಂದಾಗಿದ್ದಾರೆ.


ಕುಡಿಯಲೂ ನೀರಿಲ್ಲದೇ ಒದ್ದಾಡುತ್ತಿರುವ ಜನಕ್ಕೆ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಹಂಚುವ ಕೆಲಸಕ್ಕೆ ಯಶ್ ಅವರ ಯಶೋಮಾರ್ಗ ಮಾಡುತ್ತಿದೆ.

ಯಶ್ ಕೆಲಸಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎರಡು ಬಿಂದಿಗೆ ನೀರು ಕೊಟ್ಟ ಯಶ್ ನಿನ್ನ ಹಾಗೂ ನಿನ್ನ ಕುಟುಂಬದ ಹೊಟ್ಟೆ ತಣ್ಣಗಿರ್ಲಿ ಎಂದು ಜನ ಮನದುಂಬಿ ಹಾರೈಸುತ್ತಿದ್ದಾರೆ. ಇನ್ನು‍ ರಾಕಿಂಗ್ ಸ್ಟಾರ್ ನ ಈ ಒಳ್ಳೆಯ ಕೆಲಸಕ್ಕೆ ಸಾಮಾಜಿಕ ಜಾಲತಾಣದ ಮೂಲಕವೂ ಶುಭ ಹಾರೈಕೆ ಬರುತ್ತಿದ್ದು, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ನಮ್ಮ ಬಾಸ್ ಮಾಡ್ತಿದ್ದಾರೆ. ನೀವೇ ನಿಜವಾದ ಹೀರೋ ಎಂದು ಕೊಂಡಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ