ಕನ್ನಡ ಸಿನಿಮಾ ನೋಡಿ: ಪುಷ್ಪಗೆ ಟಾಂಗ್ ಕೊಟ್ಟ ರಚಿತಾ ರಾಂ

ಶನಿವಾರ, 18 ಡಿಸೆಂಬರ್ 2021 (10:29 IST)
ಬೆಂಗಳೂರು: ತೆಲುಗು ಮೂಲದ ಪುಷ್ಪ ಸಿನಿಮಾ ಕರ್ನಾಟಕದಲ್ಲಿ ಅಬ್ಬರಿಸುತ್ತಿರುವುದರ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇದೀಗ ನಟಿ ರಚಿತಾ ರಾಂ ಕೂಡಾ ಪ್ರತಿಕ್ರಿಯಿಸಿದ್ದಾರೆ.

ಲವ್ ಯೂ ರಚ್ಚು ಟ್ರೈಲರ್ ರಿಲೀಸ್ ವೇಳೆ ಮಾತನಾಡಿರುವ ರಚಿತಾ ರಾಂ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳನ್ನು ಬೆಳೆಸೋಣ ಎಂದಿದ್ದಾರೆ. ಈ ಮೂಲಕ ತೆಲುಗು ಮೂಲದ ಪುಷ್ಪಗೆ ಟಾಂಗ್ ಕೊಟ್ಟಿದ್ದಾರೆ.

ಇದಕ್ಕೂ ಮೊದಲು ನಟಿ ಅದಿತಿ ಪ್ರಭುದೇವ, ಧ್ರುವ ಸರ್ಜಾ ಮುಂತಾದ ನಟರೂ ಪುಷ್ಪ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಅದಿತಿ ಪ್ರಭುದೇವ ಅಂತೂ ಇದು ನಮ್ಮ ಮನೆ ಅನ್ನ ತಿನ್ನೋದಕ್ಕೆ ಪಕ್ಕದ ಮನೆ ಅಂಕಲ್ ನ ಒಪ್ಪಿಗೆ ಕೇಳಿದಂತೆ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ