ಜಲ್ಲಿಕಟ್ಟು ಸ್ಪರ್ಧೆಯ ವಿಜೇತರಿಗೆ ಬಂಪರ್ ಬಹುಮಾನ ಘೋಷಿಸಿದ ರಾಘವ ಲಾರೆನ್ಸ್

ಬುಧವಾರ, 20 ಜನವರಿ 2021 (07:12 IST)
ಚೆನ್ನೈ : ಜಲ್ಲಿಕಟ್ಟು ತಮಿಳರ ಪ್ರಮುಖ ವೀರರ ಆಟಗಳಲ್ಲಿ ಒಂದು. ಇದು ಒಂದು ಪ್ರಸಿದ್ಧ ಹಬ್ಬವಾಗಿದೆ. ಹಾಗಾಗಿ ಈ ಬಾರಿ ಈ ಆಟದಲ್ಲಿ ಗೆದ್ದವರಿಗೆ ನಿರ್ದೇಶಕ, ನಟ ರಾಘವ ಲಾರೆನ್ಸ್ ಅವರು ಬೆಳೆಬಾಳುವ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

2017ರಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪ್ರತಿಭಟನೆ ವೇಳೆ ಸೇಲಂ ಮೂಲದ ಯೋಗೇಶ್ವರನ್ ಎಂಬ ಯುವಕ ಆಕಸ್ಮಿಕವಾಗಿ ವಿದ್ಯುತ್ ತಂತಿ ಮುಟ್ಟಿ ಸಾವಿಗಿಡಾಗಿದ್ದಾರೆ. ಹಾಗಾಗಿ ದಿವಂಗತ ಯೋಗೇಶ್ವರನ್ ಅವರ ಸ್ಮರಣಾರ್ಥವಾಗಿ ಜಲ್ಲಿ ಕಟ್ಟು ಸ್ಪರ್ಧೆಯ ವಿಜೇತರಿಗೆ ಚಿನ್ನದ ನಾಣ್ಯ ನೀಡಲಾಗುವುದು ಎಂದು ರಾಘವ ಲಾರೆನ್ಸ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ