ಇನ್ಮುಂದೆ ಪುನೀತ್ ಬರ್ತ್ ಡೇಗೆ ಸಸಿ ನೆಡುವ ಅಭಿಯಾನ

ಬುಧವಾರ, 2 ಫೆಬ್ರವರಿ 2022 (10:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನದ ಸ್ಮರಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಇದಕ್ಕೂ ಮೊದಲು ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳಿಗೆ ಕರೆಯೊಂದನ್ನು ಕೊಟ್ಟಿದ್ದಾರೆ.

ನಿನ್ನೆ ಪುನೀತ್ ಗೆ ಗೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಘಣ್ಣ, ಇನ್ಮುಂದೆ ಪುನೀತ್ ಹುಟ್ಟುಹಬ್ಬದಂದು ಪ್ರತೀ ವರ್ಷ ಅಭಿಮಾನಿಗಳು ಗಿಡ ನೆಡುವ ಅಭಿಯಾನ ಮಾಡಬೇಕು. ಲಕ್ಷ ಗಿಡ ನೆಡುವುದೇ ನಮ್ಮ ಗುರಿ ಎಂದಿದ್ದಾರೆ.

ಪುನೀತ್ ಗೆ ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿತ್ತು. ಅದಕ್ಕಾಗಿಯೇ ಜನ ಅವರನ್ನು ಗುರುತಿಸುತ್ತಾರೆ. ಹೀಗಾಗಿ ಅವರ ಕನಸು ನನಸು ಮಾಡಲು ಗಿಡ ನೆಡುವ ನಿರ್ಧಾರ ಮಾಡಿರುವುದಾಗಿ ರಾಘಣ್ಣ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ