ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ ರಾಘಣ್ಣ

ಗುರುವಾರ, 9 ಡಿಸೆಂಬರ್ 2021 (17:14 IST)
ಬೆಂಗಳೂರು: ಓಟದ ಮೂಲಕ ಅಪ್ಪು ಸಮಾಧಿಗೆ ಬರುತ್ತಿರುವ ಮಹಿಳೆಯೊಬ್ಬರ ಸುದ್ದಿಯನ್ನು ಕೆಲವು ದಿನಗಳ ಹಿಂದೆ ಓದಿರುತ್ತೀರಿ. ಇದೀಗ ರಾಘವೇಂದ್ರ ರಾಜ್ ಕುಮಾರ್ ಆ ಅಭಿಮಾನಿಗೆ ಖುದ್ದಾಗಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಧಾರವಾಡದ ಮೂರು ಮಕ್ಕಳ ತಾಯಿಯೂ ಆಗಿರುವ ದ್ರಾಕ್ಷಾಯಿಣಿ ಪಾಟೀಲ್ ನವಂಬರ್ 29 ರಿಂದ ಓಟದ ಮೂಲಕವೇ ಅಪ್ಪು ಸಮಾಧಿಯತ್ತ ಬರುತ್ತಿದ್ದಾರೆ. ಈ ಮಹಿಳೆ ಈಗ ಚಿತ್ರದುರ್ಗಕ್ಕೆ ತಲುಪಿದ್ದಾರೆ.

ಈ ಮಹಿಳೆ ಬಗ್ಗೆ ತಿಳಿದುಕೊಂಡ ರಾಘಣ್ಣ ಕರೆ ಮಾಡಿ ಆಕೆಯೊಂದಿಗೆ ಮಾತನಾಡಿದ್ದಾರೆ. ಬೆಂಗಳೂರಿಗೆ ಬಂದ ಮೇಲೆ ಮಾಹಿತಿ ನೀಡುವಂತೆ ಹೇಳಿದ್ದಾರೆ. ಓಟದ ಜೊತೆಗೆ ಮಹಿಳೆ ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಾಘಣ್ಣ ಕಳಕಳಿಯಿಂದ ದ್ರಾಕ್ಷಾಯಣಿಗೆ ಆರೋಗ್ಯದ ಕಡೆಗೆ ಗಮನ ಕೊಡುವಂತೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ