ಆ ಒಂದು ಕಾರಣಕ್ಕೆ ರಾಗಿಣಿ ದ್ವಿವೇದಿ ಬಿಜೆಪಿ ಸೇರುವುದು ತಪ್ಪಿಹೋಗಿತ್ತು!

ಮಂಗಳವಾರ, 15 ಸೆಪ್ಟಂಬರ್ 2020 (09:58 IST)
ಬೆಂಗಳೂರು: ಸದ್ಯಕ್ಕೆ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪಕ್ಷಕ್ಕೆ ಸೇರಲು ಅಧಿಕೃತವಾಗಿ ತಯಾರಿ ನಡೆಸಿದ್ದರು ಎನ್ನಲಾಗಿದೆ.


ರಾಗಿಣಿ ಬಿಜೆಪಿ ಸೇರ್ಪಡೆಗೆ ವೇದಿಕೆಯೂ ಸಿದ್ಧವಾಗಿತ್ತು. ತನ್ನ ಸ್ನೇಹಿತ ರವಿಶಂಕರ್ ಸಹಾಯದಿಂದ ರಾಗಿಣಿ ಬಿಜೆಪಿ ಸೇರಲು ತಯಾರಿ ನಡೆಸಿದ್ದರು. ಡಾ. ಅಶ್ವತ್ಥ್ ನಾರಾಯಣ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಲು ತಯಾರಿ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅಶ್ವತ್ಥ್ ನಾರಾಯಣ್ ಡಿಸಿಎಂ ಅಲ್ಲ, ಎಂಎಲ್ ಸಿ ಅಶ್ವತ್ಥ್ ನಾರಾಯಣ್ ಸಮ್ಮುಖದಲ್ಲಿ ಬಿಜೆಪಿ ಸೇರಬೇಕಿತ್ತು ಎನ್ನುವುದು ರಾಗಿಣಿಗೆ ತಿಳಿದುಬಂದಿತ್ತು. ಎಂಎಲ್ ಸಿ ಸಮ್ಮುಖದಲ್ಲಿ ಸೇರ್ಪಡೆಯಾದರೆ ತನಗೆ ವರ್ಚಸ್ಸು ಇರಲ್ಲ ಎಂದು ರಾಗಿಣಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಆದರೆ ರಾಜಕೀಯ ಸೇರ್ಪಡೆಗೆ ಪೂರ್ವಭಾವಿಯಾಗಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅದೆಲ್ಲವೂ ಈಗ ಮಣ್ಣುಪಾಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ