ತಮಿಳು ಅಭಿಮಾನಿಗಳ ಮುಂದೆ ಕನ್ನಡಾಭಿಮಾನ ಮೆರೆದ ರಜನೀಕಾಂತ್

ಶನಿವಾರ, 30 ಡಿಸೆಂಬರ್ 2017 (10:19 IST)
ಚೆನ್ನೈ: ರಾಜಕೀಯ ಪ್ರವೇಶಕ್ಕೆ ಮೊದಲು ಅಭಿಮಾನಿಗಳ ಜತೆ ಚೆನ್ನೈನಲ್ಲಿ ಸರಣಿ ಸಭೆ ನಡೆಸುತ್ತಿರುವವ ಸೂಪರ್ ಸ್ಟಾರ್ ರಜನೀಕಾಂತ್ ತಮಗೆ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಹೊರ ಹಾಕಿದ್ದಾರೆ.
 

ಮೂಲತಃ ಕನ್ನಡಿಗರಾಗಿರುವ ರಜನೀಕಾಂತ್ ತನಗೆ ಮೊದಲು ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ. ‘ನಾನು ಕಲಿತಿದ್ದು ಕನ್ನಡದಲ್ಲಿ, ನಾನು ಬೆಳೆದಿದ್ದು ಕನ್ನಡ ನಾಡಿನಲ್ಲಿ. ನನ್ನ ಕುಟುಂಬಸ್ಥರು, ಸಹೋದರರು ಕನ್ನಡ ಕಲಿತಿದ್ದಾರೆ’ ಎಂದು ರಜನೀಕಾಂತ್ ಹೇಳಿದ್ದಾರೆ.

ತಮಿಳು ಚಿತ್ರರಂಗಕ್ಕೆ ಬಂದ ಮೇಲೆ ಕನ್ನಡ ಕಲಿತೆ. ನಿರ್ದೇಶಕ ಕೆ. ಬಾಲಚಂದರ್ ನನಗೆ ತಮಿಳು ಕಲಿಯಲು ಹೇಳಿದರು. ಆರಂಭದಲ್ಲಿ ನನಗೆ ತಮಿಳು ಕಷ್ಟವಾಗಿತ್ತು. ಆದರೆ ಅಭಿಮಾನಿಗಳು ನನ್ನನ್ನು ಪರಿಪೂರ್ಣ ತಮಿಳನಾಗಿಸಿದರು ಎಂದು ರಜನೀಕಾಂತ್ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ