ಪವನ್ ಕಲ್ಯಾಣ್ ಗಾಗಿ ಆಚಾರ್ಯ ಚಿತ್ರದ ಶೂಟಿಂಗ್ ರದ್ದುಪಡಿಸಿದ ರಾಮ್ ಚರಣ್

ಸೋಮವಾರ, 19 ಏಪ್ರಿಲ್ 2021 (16:29 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಚಿತ್ರೀಕರಣವನ್ನು ಹಠಾತ್ತನೆ ರದ್ದುಪಡಿಸಲಾಗಿದೆ.

ಇದಕ್ಕೆ ಕಾರಣವೇನೆಂದರೆ ರಾಮ್ ಚರಣ್ ಅವರ ಚಿಕ್ಕಪ್ಪ , ನಟ ರಾಜಕಾರಣಿ ಪವನ್ ಕಲ್ಯಾಣ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ರಾಮ್ ಚರಣ್ ಅವರ ಪತ್ನಿ ಪವನ್ ಕಲ್ಯಾಣ್ ಅವರ ವೈದ್ಯಕೀಯ ಚಿಕಿತ್ಸೆ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಹೀಗಾಗಿ ಪವನ್ ಕಲ್ಯಾಣ್ ಅವರು ಕೊರೊನಾದಿಂದ ಚೇತರಿಸಿಕೊಂಡ ಬಳಿಕ ರಾಮ್ ಚರಣ್ ಶೂಟಿಂಗ್ ಸೆಟ್ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ. ಹಾಗೇ ಪವನ್ ಕಲ್ಯಾಣ ಆರೋಗ್ಯದ ಬಗ್ಗೆ ರಾಮಚರಣ್ ವೈದ್ಯರಿಂದ  ಆಗಾಗ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ