ಆಂಧ್ರಪ್ರದೇಶ ನೆರೆ ಪರಿಹಾರಕ್ಕೆ 25 ಲಕ್ಷ ಧನ ಸಹಾಯ ಮಾಡಿದ ಚಿರು, ರಾಮ್ ಚರಣ್

ಗುರುವಾರ, 2 ಡಿಸೆಂಬರ್ 2021 (09:30 IST)
ಹೈದರಾಬಾದ್: ಆಂಧ್ರಪ್ರದೇಶದಲ್ಲಿ  ನೆರೆಯಿಂದ ಸಂತ್ರಸ್ತರಾದವರ ನೆರವಿಗೆ ಟಾಲಿವುಡ್ ಮಂದಿ ಮುಂದಾಗಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ, ಪುತ್ರ ರಾಮ್ ಚರಣ್ ತೇಜ್ ತಲಾ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಆಂಧ‍್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

ಇದಕ್ಕೂ ಮೊದಲು ಜ್ಯೂನಿಯರ್ ಎನ್ ಟಿಆರ್, ಮಹೇಶ್ ಬಾಬು ಕೂಡಾ 25 ಲಕ್ಷ ರೂ.ಗಳ ದೇಣಿಗೆ ನೀಡಿದ್ದರು. ಆಂ‍ಧ್ರದಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದಾಗಿ ಸಾಕಷ್ಟು ಜನ ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ