ದೂರದರ್ಶನದಲ್ಲಿ ರಾಮಾಯಣ ಅಂತ್ಯ: ಇನ್ನು ಶ್ರೀಕೃಷ್ಣ ದರ್ಶನ

ಶನಿವಾರ, 2 ಮೇ 2020 (09:02 IST)
ನವದೆಹಲಿ: ಲಾಕ್ ಡೌನ್ ವೇಳೆ ಜನರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ದೂರದರ್ಶನ ವಾಹಿನಿ ತನ್ನ ಹಳೆಯ ರಾಮಾಯಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಿ ಜನಪ್ರಿಯತೆ ಪಡೆದಿತ್ತು.


ಇದೀಗ ರಾಮಾಯಣ ಧಾರವಾಹಿ ಮುಕ್ತಾಯದ ಹಂತದಲ್ಲಿದ್ದು, ಇಂದು ಅಥವಾ ನಾಳೆ ಕೊನೇ ಎಪಿಸೋಡ್ ಪ್ರಸಾರವಾಗಲಿದೆ. ಈ ನಡುವೆ ರಾಮಾಯಣ ಧಾರವಾಹಿ ಮುಗಿಯಿತೆಂದು ಬೇಸರದಲ್ಲಿದ್ದ ಪ್ರೇಕ್ಷಕರಿಗೆ ದೂರದರ್ಶನ ವಾಹಿನಿ ‘ಶ್ರೀಕೃಷ್ಣ’ ಧಾರವಾಹಿ ಮೂಲಕ ರಂಜನೆ ನೀಡಲಿದೆ.

ಸೋಮವಾರದಿಂದ ರಾತ್ರಿ 9 ಗಂಟೆಗೆ ದೂರದರ್ಶನ ವಾಹಿನಿಯ ಹಳೆಯ ಶ್ರೀಕೃಷ್ಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಲಿದೆ. ಡಿಡಿ ಭಾರತಿ ಈಗಾಗಲೇ ಮಹಾಭಾರತ ಧಾರವಾಹಿ ಪ್ರಸಾರ ಮಾಡುತ್ತಿದೆ. ಆದರೆ ಇಲ್ಲಿ ಕೃಷ್ಣನ ಬಗ್ಗೆ ಹೆಚ್ಚು ವಿವರಣೆಯಿಲ್ಲ. ಶ್ರೀಕೃಷ್ಣ ಧಾರವಾಹಿಯಲ್ಲಿ ಕೃಷ್ಣನ ಕತೆಯೇ ಮುಖ್ಯವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ