‘ರಾಮಾಯಣ’ ಬಳಿಕ ‘ಶ್ರೀಕೃಷ್ಣ’ ಧಾರವಾಹಿ ಮರುಪ್ರಸಾರ ಮಾಡಲಿರುವ ದೂರದರ್ಶನ

ಶುಕ್ರವಾರ, 24 ಏಪ್ರಿಲ್ 2020 (10:11 IST)
ನವದೆಹಲಿ: ಲಾಕ್ ಡೌನ್ ವೇಳೆ ಮನೆಯಲ್ಲೇ ಕೂತಿರುವ ಜನತೆಗೆ ರಾಮಾಯಣ ಧಾರವಾಹಿಯ ಮರುಪ್ರಸಾರ ಮಾಡಿ ದೂರದರ್ಶನ ಮತ್ತೆ ಟಿಆರ್ ಪಿಯಲ್ಲಿ ಉತ್ತುಂಗಕ್ಕೇರಿತ್ತು. ಇದೀಗ ಮತ್ತೊಂದು ಜನಪ್ರಿಯ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಲು ನಿರ್ಧರಿಸಿದೆ.


ರಾಮಾಯಣದಂತೇ ದೂರದರ್ಶನದಲ್ಲಿ ಜನಪ್ರಿಯವಾಗಿದ್ದ ಧಾರವಾಹಿ ‘ಶ್ರೀಕೃಷ್ಣ’. ಭಗವಾನ್ ಶ್ರೀಕೃಷ್ಣನ ಕುರಿತಾದ ಪೌರಾಣಿಕ ಧಾರವಾಹಿ ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಅದೀಗ ಮರಳಿ ಪ್ರಸಾರವಾಗಲಿದೆ.

ಆದರೆ ಶ್ರೀಕೃಷ್ಣ ಯಾವಾಗಿನಿಂದ ಪ್ರಸಾರ ಆರಂಭವಾಗಲಿದೆ ಎಂಬುದನ್ನು ದೂರದರ್ಶನ ಸದ್ಯಕ್ಕೆ ತಿಳಿಸಿಲ್ಲ. ಇದೀಗ ರಾಮಾಯಣದಲ್ಲಿ ಉತ್ತರ ರಾಮಾಯಣ ಪ್ರಸಾರವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ