ಅಭಿಮಾನಿಯ ಮೊಬೈಲ್ ಕಿತ್ತುಕೊಂಡ ನಟ ರಾಣಾ ದಗ್ಗುಬಟ್ಟಿ

ಮಂಗಳವಾರ, 20 ಸೆಪ್ಟಂಬರ್ 2022 (09:50 IST)
ಹೈದರಾಬಾದ್: ಸೆಲೆಬ್ರಿಟಿಗಳು ದೇವಾಲಯಕ್ಕೆ ಬಂದರೂ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗುವುದೂ ಇದೆ.

ಅದೇ ರೀತಿ ನಟ ರಾಣಾ ದಗ್ಗುಬಟ್ಟಿಯಿಂದ ನಡೆದಿದೆ. ರಾಣಾ ದಗ್ಗುಬಟ್ಟಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ವೇಳೆ ಅಭಿಮಾನಿಗಳು ಮುತ್ತಿಕೊಂಡಿದ್ದರು. ಸೆಲ್ಫೀ ತೆಗೆಯದಂತೆ ರಾಣಾ ಮನವಿ ಮಾಡಿದ್ದರು. ಹಾಗಿದ್ದರೂ ಅಭಿಮಾನಿಯೊಬ್ಬ ಅಡ್ಡಗಟ್ಟಿ ಸೆಲ್ಫೀ ತೆಗೆಯಲು ಹೊರಟಿದ್ದಾನೆ.

ಇದರಿಂದ ಸಿಟ್ಟಿಗೆದ್ದ ರಾಣಾ ಆತನ ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ಆತನಿಗೆ ಮೊಬೈಲ್ ಹಿಂದಿರುಗಿಸಿ ದೇವಸ್ಥಾನದಲ್ಲಿ ಸೆಲ್ಫೀ ಬೇಡ ಎಂದು ನಗುತ್ತಲೇ ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ