ಬಾಹುಬಲಿ ಚಿತ್ರದ ಸಕ್ಸಸ್ ಗಿಂತಲೂ ರಾಜಮೌಳಿಯವರ ವಿನಯ ದೊಡ್ಡದು

ಭಾನುವಾರ, 9 ಜುಲೈ 2017 (07:55 IST)
ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 2.0 ನಿರ್ಮಾಪಕ  ಲೈಕಾ ಪ್ರೊಡಕ್ಷನ್ ನ ರಾಜು ಮಹಾಲಿಂಗಂ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಭೇಟಿಯಾಗಿರುವುದು ಸಿನಿಪ್ರಿಯರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.
 
ರಾಜಮೌಳಿಯವರನ್ನು ಭೇಟಿಯಾದ ಬಳಿಕ ಟ್ವೀಟ್ ಮಾಡಿರುವ ರಾಜು ಮಹಾಲಿಂಗಂ ’ರಾಜಮೌಳಿಯವರನ್ನು ಭೇಟಿಯಾದೆ. ಬಾಹುಬಲಿ ಚಿತ್ರದ ಸಕ್ಸಸ್ ಗಿಂತಲೂ ಅವರ ವಿನಯ ದೊಡ್ಡದು’ ಎಂದು ತಿಳಿಸಿದ್ದಾರೆ.
 
ಇನ್ನು ಶಂಕರ್ ನಿರ್ದೇಶನದ ರೋಬೋದ ಮುಂದುವರೆದ ಭಾಗವಾಗಿ 2.0 ಬರುತ್ತಿದೆ. ಈ ಸಿನಿಮಾದ ವಿಶೇಷತೆ ಎಂದರೆ ಸುಮಾರು 400 ಕೋಟಿ ಬಜೆಟ್ ನಲ್ಲಿ 3ಡಿಯಲ್ಲೇ ಚಿತ್ರೀಕರಿಸಿರುವುದು. ಭಾರತದಲ್ಲಿ ಸಧ್ಯ 1500 ತ್ರಿಡಿ ತೆರೆಗಳಿವೆ. ಅದೇ ಚೀನಾದಲ್ಲಾದರೆ 10,000 ಇದೆ. ನಮ್ಮ ಸಿನಿಮಾ 2.0 ಬಿಡುಗಡೆಯಾಗುವ ವೇಳೆಗೆ ಇನ್ನಷ್ಟು ತ್ರಿಡಿ ತೆರೆಗಳು ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
 
ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಕ್ರಿಮಿನಲ್ ವಕೀಲರಾಗಿ ಕಾಣಿಸಿಕೊಳ್ಲಲಿದ್ದಾರೆ. ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಹೆಸರು ರಾಜೇಂದ್ರ ಪೊನ್ನಪ್ಪ. ಇದೀಗ ಅದೇ ಹೆಸರನ್ನು ಚಿತ್ರದ ಟಿಅಟಲ್ ಆಗಿ ಇಟ್ಟಿರುವುದು ವಿಶೇಷ.
 

ವೆಬ್ದುನಿಯಾವನ್ನು ಓದಿ