ಲಾರಿಗಳ ಮಧ್ಯೆ ಕುಳಿತು ನನ್ನ ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ರೇಣುಕಾಸ್ವಾಮಿ ಫೋಟೋ ವೈರಲ್

Krishnaveni K

ಗುರುವಾರ, 5 ಸೆಪ್ಟಂಬರ್ 2024 (09:44 IST)
Photo Credit: X
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಳಿಕ ಪ್ರಾಣ ಭೀತಿಯಲ್ಲಿ ರೇಣುಕಾಸ್ವಾಮಿಗಳ ಲಾರಿಗಳ ಮಧ್ಯೆ ಕುಳಿತು ನನ್ನ ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ಫೋಟೋ ಈಗ ವೈರಲ್ ಆಗಿದೆ.

ಪೊಲೀಸರು ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಿ ಈ ಫೋಟೋಗಳನ್ನು ಮರಳಿ ಪಡೆದಿದ್ದರು. ಅದರಲ್ಲಿ ಒಂದು ಫೋಟೋದಲ್ಲಿ ಎರಡು ಲಾರಿಗಳ ಮಧ್ಯೆ ಕುಳಿತು ರೇಣುಕಾಸ್ವಾಮಿ ಅಂಗಲಾಚುತ್ತಿರುವ ದೃಶ್ಯವಿದ್ದು ಕರುಳು ಚುರುಕ್ ಎನಿಸುವಂತಿದೆ. ಈ ಫೋಟೋದಲ್ಲಿ ರೇಣುಕಾಸ್ವಾಮಿ ಬಟ್ಟೆ ಬಿಚ್ಚಲಾಗಿದೆ.

ಇನ್ನೊಂದು ಫೋಟೋದಲ್ಲಿ ಪ್ರಜ್ಞೆ ತಪ್ಪಿದ್ದ ರೇಣುಕಾಸ್ವಾಮಿ ನೆಲದ ಮೇಲೆ ಬಿದ್ದುಕೊಂಡಿದ್ದಾನೆ. ಆ ಫೋಟೋದಲ್ಲಿ ಆತ ಬಿಳಿ ಬನಿಯನ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದಾನೆ. ಈ ಫೋಟೋಗಳನ್ನು ಆರೋಪಿಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಆದರೆ ಬಳಿಕ ಡಿಲೀಟ್ ಮಾಡಿದ್ದರು.

ಇದೀಗ ಪೊಲೀಸರು ಮೊಬೈಲ್ ರಿಟ್ರೀವ್ ಮಾಡಿ ಫೋಟೋಗಳನ್ನು ಮರಳಿ ಪಡೆದಿದ್ದಾರೆ. ಈ ಫೋಟೋಗಳು ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷ್ಯವಾಗಿದೆ. ಈ ಎರಡು ಫೋಟೋಗಳು ರೇಣುಕಾಸ್ವಾಮಿ ಮೇಲೆ ನಡೆದ ಕ್ರೌರ್ಯ ಯಾವ ಮಟ್ಟಿಗಿತ್ತು ಎಂಬುದನ್ನು ಸೂಚಿಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ