ಕಾಂತಾರ ಚಿತ್ರೀಕರಣ ನಡೆದಿದ್ದ ಜೈಲು ಉಳಿಸಲು ರಿಷಬ್ ಶೆಟ್ಟಿ ಹೋರಾಟ!

ಬುಧವಾರ, 12 ಜುಲೈ 2023 (16:58 IST)
ಉಡುಪಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಕಾಂತಾರ ಜೀವಮಾನದಲ್ಲೇ ಮರೆಯಲಾರದಷ್ಟು ಸಕ್ಸಸ್, ಹೆಸರು ಕೊಟ್ಟಿದೆ. ಹೀಗಾಗಿ ಈ ಸಿನಿಮಾ ಜೊತೆಗಿನ ಎಲ್ಲಾ ನಂಟುಗಳು ರಿಷಬ್ ಗೆ ವಿಶೇಷವೇ.

ಕಾಂತಾರ ಸಿನಿಮಾದಲ್ಲಿ ಜೈಲಿನ ದೃಶ್ಯವೊಂದು ನಿಮಗೆ ನೆನಪಿರಬಹುದು. ಆ ಶೂಟಿಂಗ್ ಆಗಿದ್ದು ಉಡುಪಿಯ ಜೈಲು ಕಟ್ಟಡವೊಂದರಲ್ಲಿ. ಆ ಕಟ್ಟಡವನ್ನು ಈಗ ಕೆಡವಲು ತಯಾರಿ ನಡೆದಿದೆಯಂತೆ.

ಹೀಗಾಗಿ ಐತಿಹಾಸಿಕ ಕಟ್ಟಡ ಉಳಿಸಲು ಹೋರಾಟವೊಂದು ಆರಂಭವಾಗಿದ್ದು, ಇದಕ್ಕೆ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. ಬ್ರಿಟಿಷರ ಕಾಲದ ಈ ಜೈಲು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಹೋರಾಟಗಾರರನ್ನು ಬಂಧಿಸಿಡುವ ಜಾಗವಾಗಿತ್ತು. ಶಿಥಿಲಗೊಂಡಿರುವ ಈ ಕಟ್ಟಡವನ್ನು ತೆರವುಗೊಳಿಸಲು ಯತ್ನಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಅದರ ಬದಲು ಅದನ್ನು ಐತಿಹಾಸಿಕ ಕಟ್ಟಡವಾಗಿ ಉಳಿಸಿಕೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ. ಈ ಹೋರಾಟಕ್ಕೆ ರಿಷಬ್ ಸಾಥ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ