ಕಿಚ್ಚ ಸುದೀಪ್ ವಿವಾದದ ಬಗ್ಗೆ ಶಿವಣ್ಣ ಕೊಟ್ರು ಖಡಕ್ ರಿಯಾಕ್ಷನ್

ಬುಧವಾರ, 12 ಜುಲೈ 2023 (16:50 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕರ ನಡುವಿನ ವಿವಾದದ ಬಗ್ಗೆ ಇಂದು ನಟ ಶಿವರಾಜ್ ಕುಮಾರ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಶಿವಣ್ಣ ಹುಟ್ಟುಹಬ್ಬದ ನಿಮಿತ್ತ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಸುದೀಪ್ ಮತ್ತು ನಿರ್ಮಾಪಕರ ವಿವಾದ ಬಗೆಹರಿಸಲು ಚಿತ್ರರಂಗದ ಹಿರಿಯನಾಗಿ ಮಧ‍್ಯಪ್ರವೇಶಿಸುತ್ತೀರಾ ಎಂದು ಕೇಳಲಾಯಿತು.

ಇದಕ್ಕೆ ಉತ್ತರಿಸಿದ ಶಿವಣ್ಣ ನನಗೆ ನಾಯಕತ್ವ ಬೇಡ. ನಾವು ಎಲ್ಲರೂ ಜೊತೆ ಸೇರಿ ವಿವಾದ ಬಗೆ ಹರಿಸೋಣ. ಎರಡೂ ಕಡೆಯವರನ್ನು ಕೂರಿಸಿ ಮಾತನಾಡಬೇಕು ಎಂದರೆ ನಾನು ರೆಡಿ. ಎಲ್ಲದಕ್ಕೂ ಒಂದು ವಾರದಲ್ಲಿ ಪರಿಹಾರ ಸಿಗಬಹುದು. ಕಾದು ನೋಡಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ