ಸಾಹಸಸಿಂಹ ವಿಷ್ಣುವರ್ಧನ್ 10 ನೇ ಪುಣ್ಯ ಸ್ಮರಣೆ ಇಂದು

ಸೋಮವಾರ, 30 ಡಿಸೆಂಬರ್ 2019 (09:32 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 10 ನೇ ಪುಣ್ಯ ಸ್ಮರಣೆ ದಿನವಿಂದು. ಇಂದು ಮೈಸೂರಿನ  ಅವರ ಸ್ಮಾರಕ ನಿರ್ಮಾಣದ ಭೂಮಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.


ಇನ್ನು, ಸಾಹಸಸಿಂಹನ ಬಗ್ಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದುಕೊಂಡಿದ್ದಾರೆ.

ವಿಷ್ಣುವರ್ಧನ್ ಕಟ್ಟಾ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ ಭಾವುಕರಾಗಿ ಟ್ವೀಟ್ ಮಾಡಿದ್ದು, ನಿಮ್ಮನ್ನು ನಾವು ಸ್ಮರಣೆ ಮಾಡಬೇಕಾಗಿಲ್ಲ. ಮರೆತವರನ್ನು ಮಾತ್ರ ಸ್ಮರಣೆ ಮಾಡಬೇಕಾಗುತ್ತದೆ. ನೀವು ಯಾವತ್ತೂ ನಮ್ಮ ನೆನಪಿನಿಂದ ಮರೆಯಾಗಲ್ಲ. ನೀವು ಹಚ್ಚಿದ ದೀಪದ ಬೆಳಕಿನಲ್ಲಿ ನಾವು, ಚಿತ್ರರಂಗ ನಡೆಯುತ್ತಿದೆ ಎಂದು ಸಂದೇಶ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ