ಯುಗಾದಿ ಹಬ್ಬಕ್ಕೆ ಎಚ್ಚರಿಕೆಯ ಜತೆ ಶುಭ ಕೋರಿದ ತಾರೆಯರು

ಬುಧವಾರ, 25 ಮಾರ್ಚ್ 2020 (09:42 IST)
ಬೆಂಗಳೂರು: ಇಂದು ಯುಗಾದಿ ಹಬ್ಬ. ಆದರೆ ಕೊರೋನಾವೈರಸ್ ನಿಂದಾಗಿ ಹಬ್ಬದ ಕಳೆಯೇ ಮಾಸಿ ಹೋಗಿದೆ. ಜನರು ದಿನ ಕಳೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ತಾರೆಯರು ಶುಭಾಷಯದ ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.


ಯುಗಾದಿ ಹಬ್ಬಕ್ಕೆ ಶುಭ ಕೋರಿರುವ ನಟ ಪುನೀತ್ ರಾಜ್ ಕುಮಾರ್ ಮನೆಯಲ್ಲೇ ಇರಿ, ಸೇಫ್ ಆಗಿರಿ ಎಂದಿದ್ದಾರೆ. ಈ ಬಾರಿ ಹಬ್ಬದೂಟ ಮಾಡುವ ಸ್ಥಿತಿಯಲ್ಲಿ ಅಭಿಮಾನಿಗಳಿಲ್ಲ.

ನಟ ರಮೇಶ್ ಅರವಿಂದ್, ಜಗ್ಗೇಶ್, ಅನಿರುದ್ಧ್,  ನಟಿ ತಾರಾ ಸೇರಿದಂತೆ ಅನೇಕರು ಯುಗಾದಿ ಹಬ್ಬಕ್ಕೆ ಶುಭಾಷಯ ಕೋರಿದ್ದಾರೆ. ಮನೆಯಲ್ಲೇ ಇದ್ದು ಹಬ್ಬ ಸರಳವಾಗಿ ಆಚರಿಸಿ ಎಂದೂ ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ