ತ್ರಿವಿಕ್ರಮ ಪತ್ರಿಕಾಗೋಷ್ಠಿಯಲ್ಲಿ ನಟ ಶರಣ್ ಎಡವಟ್ಟು

ಬುಧವಾರ, 11 ಮೇ 2022 (09:40 IST)
ಬೆಂಗಳೂರು: ಕಾಮಿಡಿ ಕಿಂಗ್ ಶರಣ್ ತ್ರಿವಿಕ್ರಮ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಮೇಲೆ ಎಡವಟ್ಟು ಮಾಡಿಕೊಂಡಿದ್ದಾರೆ.

ವೇದಿಕೆಯಲ್ಲಿ ಹಿರಿಯ ನಟಿ ತಾರಾ, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ವಿಕ್ರಮ್ ರವಿಚಂದ್ರನ್, ನಟಿ ಆಕಾಂಕ್ಷ ಸಿಂಗ್ ಸೇರಿದಂತೆ ಅನೇಕರು ಇದ್ದರು.

ಈ ವೇಳೆ ವೇದಿಕೆ ಬಂದ ಶರಣ್ ಎಲ್ಲರಿಗೂ ನಮಸ್ಕಾರ ಮಾಡುತ್ತಾ ಹಿಂದೆ ನೋಡದೇ ಸೀಟ್ ಮೇಲೆ ಕೂರಲು ಯತ್ನಿಸಿದ್ದಾರೆ. ಆದರೆ ಆ ಕುರ್ಚಿಯಲ್ಲಿ ಆಗಲೇ ನಟಿ ಆಕಾಂಕ್ಷ ಕೂತಿದ್ದರು. ಹೀಗಾಗಿ ಅವರ ತೊಡೆ ಮೇಲೆ ಹೆಚ್ಚು ಕಡಿಮೆ ಕೂತೇ ಬಿಟ್ಟರು. ತಕ್ಷಣವೇ ಪಕ್ಕದಲ್ಲಿದ್ದ ತಾರಾ ಶರಣ್ ರನ್ನು ಎಚ್ಚರಿಸಿದರು. ಇಡೀ ವೇದಿಕೆ ನಗೆಗಡಲಲ್ಲಿ ಮುಳುಗಿದರೆ ಶರಣ್ ಪೆಚ್ಚಾಗಿ ಇನ್ನೊಂದು ಆಸನದಲ್ಲಿ ಕೂತರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ