ವಿನೋದ್ ರಾಜ್ ಗೆ ಧೈರ್ಯ ತುಂಬಿದ ಶಿವಣ್ಣ

ಮಂಗಳವಾರ, 28 ನವೆಂಬರ್ 2023 (20:45 IST)
ಲೀಲಾವತಿ ಅವ್ರದ್ದು ಒಳ್ಳೆ ವ್ಯಕ್ತಿತ್ವ ಅದ್ಕೆ ಇಷ್ಟು ಸ್ಟ್ರಾಂಗ್ ಇದ್ದಾರೆ.ವಿನೋದ್ ಅವರನ್ನ ನೋಡಿದಾಗ ತಾಯಿಯನ್ನು ನೋಡಿದ ಹಾಗೆ ಆಗುತ್ತೆ.ಜನರ ಪ್ರೀತಿ.. ನನ್ನ  ಪ್ರೀತಿ ವಿನೋದ್ ಕುಟುಂಬದ ಮೇಲಿದೆ.ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ.ನನ್ನ ತಂದೆ ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ.ನನ್ನ ಮದುವೆ ಮಗಳ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ.ನಾವು ದಿನ ಸಿಗಲ್ಲ ಸಿಕ್ಕಾಗ ಆ ಕ್ಷಣ ನಮ್ಮದು ಎಂದು ನಟ ಶಿವಕುಮಾರ್ ಹೇಳಿದ್ದಾರೆ.
 
ವಿನೋದ್ ರಾಜ್ ಗೆ ಶಿವಣ್ಣ ಧೈರ್ಯ ತುಂಬಿದ್ದಾರೆ.ಅಲ್ಲದೇ ನನ್ನ ವಾಯ್ಸ್ ಲೀಲಮ್ಮ ಕಂಡು ಹಿಡಿದ್ರು .ಈ ವಯಸ್ಸಲ್ಲಿ ತಾಳೋ ಶಕ್ತಿ ಇದೆಯಲ್ಲವಾ.ಯುಗಪುರುಷರು ಅಂತಾರೆ.ಒಳ್ಳೆ ಮನಸ್ಸು ಇರೋರು.ಅವಾಗಿಂದ ನಂಗೆ ಅದೇ ಪ್ರೀತಿ ಇದೆ.ಚಿಕ್ಕವಯಸ್ಸಿನಿಂದಾನೂ ಅದೇ ಆತ್ಮೀಯತೆ ಇದೆ.ನಂಗೂ ವಿನೋದ್ ನೋಡಿದಾಗೆಲ್ಲ ತಾಯಿ ನೋಡಿದ ಹಾಗೆ ಹಾಗುತ್ತೆ.ದೇವರ ಆಶೀರ್ವಾದ ಇದೆ ಚೆನ್ನಾಗಿರ್ತಾರೆ.ತಾಯಿ ಅಂದ್ಮೇಲೆ ಪ್ರೀತಿ ಇರುತ್ತೆ ವಿನೋದ್ ಆ ರೀತಿ ನಿರ್ಧಾರ ತಗೋಬೇಡಿ ನೊವಾಗುತ್ತೆ.ಧೈರ್ಯವಾಗಿರಿ. ಏನು ಆಗಲ್ಲ ಎಂದು ನಟ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ