ಮಡೆನೂರು ಮನುಗೆ ಮನೆಗೆ ಬಂದರೆ ಗೇಟ್ ಕೂಡಾ ತೆಗೆಯದ ಶಿವಣ್ಣ

Krishnaveni K

ಬುಧವಾರ, 25 ಜೂನ್ 2025 (15:26 IST)
ಬೆಂಗಳೂರು: ಶಿವಣ್ಣನ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದ ನಟ ಮಡೆನೂರು ಮನು ಈಗ ಕ್ಷಮೆ ಕೇಳಲೆಂದು ಅವರ ಮನೆಗೆ ಬಂದಿದ್ದಾರೆ. ಆದರೆ ಮನು ಮನೆಗೆ ಬಂದರೆ ಶಿವಣ್ಣ ಗೇಟ್ ಕೂಡಾ ತೆಗೆಯಲಿಲ್ಲ.

ಮಡೆನೂರು ಮನು ವಿರುದ್ಧ ಸಹ ನಟಿ ಮೇಲೆ ಅತ್ಯಾಚಾರ, ಬಲವಂತದಿಂದ ತಾಳಿ ಕಟ್ಟಿದ ಆರೋಪವಿದೆ. ಈ ಸಂಬಂಧ ಅವರು ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಈ ನಡುವೆ ಅವರು ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಅಡಿಯೋ ವೈರಲ್ ಆಗಿತ್ತು. ಶಿವಣ್ಣ ಇನ್ನು ಕೆಲವೇ ದಿನಗಳಲ್ಲಿ ಸತ್ತೋಗ್ತಾರೆ ಎಂದು ಮನು ಎಂದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನು ಮೇಲೆ ನಿಷೇಧ ಹೇರಿತ್ತು.

ಇದೀಗ ಜೈಲಿನಿಂದ ಹೊರಬಂದ ಕೂಡಲೇ ಮನು ಸಿಕ್ಕ ಸಿಕ್ಕವರ ಕೈ ಕಾಲು ಹಿಡಿದು ನಿಷೇಧ ಹಿಂತೆಗೆಯಲು ಹರಸಾಹಸಪಡುತ್ತಿದ್ದಾರೆ. ಇನ್ನು ಶಿವಣ್ಣ ಮನೆಗೂ ತನ್ನ ಮಗು, ಪತ್ನಿ ಸಮೇತ ಬಂದು ಕ್ಷಮೆ ಕೇಳಲು ಬಂದಿದ್ದಾರೆ. ಆದರೆ ಗೇಟ್ ತೆರೆಯಲೇ ಇಲ್ಲ.

ಸಾಕಷ್ಟು ಹೊತ್ತು ನಾಗವಾರದಲ್ಲಿರುವ ಶಿವಣ್ಣ ನಿವಾಸ ಶ್ರೀಮುತ್ತು ಎದುರು ತನ್ನ ಮಗು, ಪತ್ನಿ ಜೊತೆ ಮಡೆನೂರು ಮನು ನಿಂತುಕೊಂಡು ಕಾದಿದ್ದೇ ಬಂತು. ಶಿವಣ್ಣ ಮಾತ್ರ ಕರುಣೆ ತೋರಿಲ್ಲ. ಇನ್ನು, ಇದಕ್ಕೆ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದು, ಬಾಯಿಗೆ ಬಂದಿದ್ದನ್ನೆಲ್ಲಾ ಹೇಳಿ ಈಗ ಕ್ಷಮೆ ಕೊಡಿ ಎಂದು ಬಂದರೆ ಹೇಗೆ? ಈತನಿಗೆ ಸರಿಯಾದ ಶಾಸ್ತಿಯಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ