ಅವಕಾಶವಿಲ್ಲ ಎಂದು ಅತ್ತ ಅಭಿಜಿತ್ ಗೆ ಶಿವಣ್ಣ ಮಾಡಿದ್ದೇನು ಗೊತ್ತಾ?!

ಮಂಗಳವಾರ, 1 ನವೆಂಬರ್ 2022 (08:40 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಜೋಡಿ ನಂ.1 ವೇದಿಕೆಯಲ್ಲಿ ಇತ್ತೀಚೆಗೆ ಹಿರಿಯ ನಟ ಅಭಿಜಿತ್ ಪತ್ನಿ ತಮ್ಮ ಪತಿಗೆ ಈಗ ಸಿನಿಮಾಗಳಲ್ಲಿ ಅವಕಾಶವೇ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು.

ಆ ಕಾರ್ಯಕ್ರಮದಲ್ಲಿದ್ದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನನ್ನ ಮುಂದಿನ ಸಿನಿಮಾದಲ್ಲಿ ಅಭಿಜಿತ್ ಇರ್ತಾರೆ ಎಂದು ಭರವಸೆ ನೀಡಿದ್ದರು.

ಇದೀಗ ಶಿವಣ್ಣ ನುಡಿದಂತೆ ನಡೆದಿದ್ದಾರೆ. ಶಿವರಾಜ್ ಕುಮಾರ್ ಘೋಷ್ಟ್ ಎನ್ನುವ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಹಿರಿಯ ನಟ ಅಭಿಜಿತ್ ಗೆ ಕರೆದು ಅವಕಾಶ ಕೊಟ್ಟಿದ್ದಾರೆ. ಇದಲ್ಲವೇ ದೊಡ್ಮನೆಯ ದೊಡ್ಡ ಗುಣ?


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ