ರಾಘವೇಂದ್ರ ರಾಜ್ ಕುಮಾರ್ ಪುತ್ರನ ಬೆಂಬಲಕ್ಕೆ ಬಂದ ಶಿವರಾಜ್ ಕುಮಾರ್

ಶುಕ್ರವಾರ, 28 ಡಿಸೆಂಬರ್ 2018 (09:40 IST)
ಬೆಂಗಳೂರು: ಕೆಜಿಎಫ್ ಅಬ್ಬರದ ನಡುವೆ ಇಂದು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ  ಅನಂತ್ ವರ್ಸಸ್ ನುಸ್ರತ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.


ಕೆಜಿಎಫ್ ಅಬ್ಬರದ ನಡುವೆ ಇಂದು ಸ್ಯಾಂಡಲ್ ವುಡ್ ನಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅನಂತ್ ಸಿನಿಮಾವಲ್ಲದೆ, ಶೃತಿ ಹರಿಹರನ್, ಸಂಚಾರಿ ವಿಜಯ್ ಅಭಿನಯದ ನಾತಿ ಚರಾಮಿ ಚಿತ್ರಗಳು ಇಂದು ತೆರೆಗೆ ಬರುತ್ತಿವೆ.

ಹೀಗಿರುವಾಗ ಈ ಎರಡು ಚಿತ್ರಗಳನ್ನು ಜನ ನೋಡಲು ಬರುವಂತೆ ಮಾಡುವುದು ಸ್ವಲ್ಪ ಕಷ್ಟವೇ. ಹೀಗಿರುವಾಗ ವಿನಯ್ ಚಿತ್ರವನ್ನು ವೀಕ್ಷಿಸುವಂತೆ ಶಿವಣ್ಣ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ