ಪುನೀತ್ ಉಳಿಸಿಕೊಳ್ಳಲಾಗದ ನೋವು ತೋಡಿಕೊಂಡ ಶಿವರಾಜ್ ಕುಮಾರ್

ಬುಧವಾರ, 3 ನವೆಂಬರ್ 2021 (17:59 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ಸಾವನ್ನಪ್ಪಿರುವುದು ಅಣ್ಣ ಶಿವರಾಜ್ ಕುಮಾರ್ ಗೆ ತೀವ್ರ ಆಘಾತ ತಂದಿದೆ. ಇಷ್ಟೆಲ್ಲಾ ಇದ್ದರೂ ಕೊನೆಗೆ ಸಹೋದರನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಶಿವಣ್ಣ ನೋವು ತೋಡಿಕೊಂಡಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿರುವ ಶಿವಣ್ಣ ‘ವಿಧಿ ಅವನಿಗೆ 10 ನಿಮಿಷ ಟೈಂ ಕೊಡಬೇಕಿತ್ತು. ಯಾವುದೇ ಸೂಚನೆ ಇರಲಿಲ್ಲ. ಯಾರಿಗೂ ಏನೂ ಗೊತ್ತಾಗಲಿಲ್ಲ’ ಎಂದು ಶಿವಣ್ಣ ನೊಂದುಕೊಂಡಿದ್ದಾರೆ.

ಇನ್ನು, ಇದಕ್ಕೂ ಮೊದಲು ಭಜರಂಗಿ 2 ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಲ್ಲೇ ಅಪ್ಪು ಕೊಂಚ ಮಂಕಾಗಿದ್ದ ಎಂದು ಶಿವಣ್ಣ ಪತ್ನಿ ಗೀತಾ ಹೇಳಿದ್ದರಂತೆ. ಆದರೆ ಶೂಟಿಂಗ್ ಮುಗಿಸಿ ಸುಸ್ತಾಗಿರಬೇಕು ಎಂದು ಸುಮ್ಮನಾದರಂತೆ. ಗೊತ್ತಾಗಿದ್ದರೆ ಆಗಲೇ ಚೆಕ್ ಮಾಡಿಸಲು ಹೇಳುತ್ತಿದ್ದೆ ಎಂದು ಶಿವಣ್ಣ ಹಲುಬಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ