ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿನಾಯಕ ಮುಹೂರ್ತಕ್ಕೆ ‘ಅಮ್ಮ’ ಸುಮಲತಾ ಸಾಥ್

ಶುಕ್ರವಾರ, 6 ಡಿಸೆಂಬರ್ 2019 (11:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ಅಭಿನಯಿಸಲಿರುವ ಐತಿಹಾಸಿಕ ಸಿನಿಮಾ ‘ರಾಜವೀರ ಮದಕರಿನಾಯಕ’ ಸಿನಿಮಾಗೆ ಇಂದು ಬೆಳಿಗ್ಗೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವರ ಸನ್ನಿಧಿಯಲ್ಲಿ ಮುಹೂರ್ತ ಪೂಜೆ ನಡೆದಿದೆ.


ಈ ವೇಳೆ ದರ್ಶನ್ ಸದಾ ತಮ್ಮ ಅಮ್ಮನ ಸಮಾನ ಎಂದೇ ಕರೆಯುವ ಸುಮಲತಾ ಅಂಬರೀಶ್ ಕೂಡಾ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮುನಿರತ್ನ ಮುಂತಾದವರೂ ಹಾಜರಿದ್ದರು.

ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾಗೆ ಗಂಡುಗಲಿ ಮದಕರಿನಾಯಕ ಎಂದು ಟೈಟಲ್ ಬದಲಾಗಿ ಮುಹೂರ್ತ ಸಂದರ್ಭದಲ್ಲಿ ‘ರಾಜವೀರ ಮದಕರಿನಾಯಕ’ ಎಂದು ಉಲ್ಲೇಖಿಸಲಾಗಿದೆ. ಅಂತೂ ದರ್ಶನ್ ಮತ್ತೊಂದು ಐತಿಹಾಸಿಕ ಸಿನಿಮಾಗೆ ಚಾಲನೆ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ