ಪತ್ರಕರ್ತೆ ಜೊತೆ ಅನುಚಿತ ವರ್ತನೆ ಆರೋಪ: ನಟ ಸುರೇಶ್ ಗೋಪಿ ಕ್ಷಮೆಯಾಚನೆ

ಭಾನುವಾರ, 29 ಅಕ್ಟೋಬರ್ 2023 (13:30 IST)
ಕೊಚ್ಚಿ: ಮಲಯಾಳಂ ಚಿತ್ರನಟ, ಬಿಜೆಪಿ ನಾಯಕ ಸುರೇಶ್ ಗೋಪಿ ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪ ಬಂದಿದ್ದು, ಘಟನೆ ಬಗ್ಗೆ ನಟ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲಲು ವಿಫಲವಾಗಿದ್ದೇಕೆ ಎಂದು ಪತ್ರಕರ್ತೆ ಪ್ರಶ್ನೆ ಮಾಡಿದಾಗ ಸುರೇಶ್ ಗೋಪಿ ಆಕೆಯ ಭುಜಕ್ಕೆ ಹಾಕಿ ಉತ್ತರಿಸಿದ್ದಾರೆ. ಅದು ಆಕೆಗೆ ಇಷ್ಟವಾಗಲಿಲ್ಲ. ಹೀಗಾಗಿ ಆಕೆ ಹಿಂದೆ ಸರಿದಿದ್ದಾರೆ. ಆದರೆ ಮತ್ತೆ ಆಕೆಯ ಭುಜ ಬಳಸಿ ಮಾತನಾಡಲು ಹೋದಾಗ ಆಕೆ ಬಲವಂತವಾಗಿ ಕೈ ಕಿತ್ತೊಗೆದಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿದ್ದವು.

ಇದರ ಬೆನ್ನಲ್ಲೇ ನಟನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ವಿವಾದವಾಗುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ