ಕೆಟ್ಟ ಕಮೆಂಟ್‌ ಮಾಡಿದವರಿಗೆ ಧನ್ಯವಾದಗಳು, ದರ್ಶನ್‌ ಬಂಧನದ ಬಗ್ಗೆ ಮಗ ವಿನೀಶ್‌ ಭಾವುಕ ಪೋಸ್ಟ್

sampriya

ಗುರುವಾರ, 13 ಜೂನ್ 2024 (21:05 IST)
Photo By X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಅವರ ಬಗ್ಗೆ ಆಕ್ರೋಶ, ಟೀಕೆ ಜೋರಾಗಿದ್ದು ಇದರ ಬೆನ್ನಲ್ಲೇ ಅವರ ಮಗ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಅವರ ಕೃತ್ಯದ ಬಗ್ಗೆ  ಟ್ರೋಲ್ ಪೇಜ್, ಫ್ಯಾನ್ಸ್ ಪೇಜ್ ಸೇರಿದಂತೆ ಹಲವು ಸೋಷಿಯಲ್ ಪೇಜ್​​ಗಳಲ್ಲಿ ಈ ಕುರಿತು ಚರ್ಚೆ ಜೋರಾಗಿದೆ.

ಈ ಸಂದರ್ಭ ತಂದೆ ಅರೆಸ್ಟ್ ಆಗಿರುವ ಬಗ್ಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಪುತ್ರ ವಿನೀಶ್ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ತಂದೆಗಾಗಿ ಮಗ ಮಾಡಿರುವ ಈ ಪೋಸ್ಟ್ ವೈರಲ್ ಆಗಿದೆ.

ಕೆಟ್ಟದಾಗಿ ಕಮೆಂಟ್ ಮಾಡಿದ ಎಲ್ಲರಿಗು ಧನ್ಯವಾದಗಳು. ನನ್ನ ತಂದೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ನೀವು 15 ವರ್ಷದ ಮಗನನ್ನ ಪರಿಗಣಿಸಲೆ ಇಲ್ಲ. ನನ್ನ ಭಾವನೆಗಳಿಗೆ ಬೆಲೆ ಕೊಡದ ನೀವು ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ಬೆಂಬಲದ ಅಗತ್ಯವಿರುವಾಗ ನನ್ನನ್ನು ಶಪಿಸು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ