ಮಾಡಕ್ಕೆ ಕೆಲಸ ಇಲ್ಲ, ದರ್ಶನ್ ನದ್ದು ಒಂದೇ ಸುದ್ದೀನಾ: ಗುರುಕಿರಣ್

Sampriya

ಶುಕ್ರವಾರ, 20 ಸೆಪ್ಟಂಬರ್ 2024 (18:53 IST)
Photo Courtesy X
ಬೆಂಗಳೂರು: ದರ್ಶನ್ ಒಬ್ಬನೇ  ಈ ರೀತಿ ತಪ್ಪು ಮಾಡಿರುವುದ. ಸದ್ಯ  ಪ್ರಕರಣ ಕೋರ್ಟ್‌ನಲ್ಲಿದ್ದು, ಈ ಪ್ರಕರಣದಿಂದ ಹೊರಗಡೆ ಬಂದ್ರೆ ಖುಷಿಯಾಗುತ್ತದೆ ಎಂದು ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸುದ್ದಿಗಳು ಮಾರಾಟವಾಗುತ್ತಿದೆ. ಇಂದು ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಮಾರ್ಕೆಂಟಿಗ್ ಹಿಂದೆ ಬಿದ್ದಿದೆ. ದರ್ಶನ್ ಬಗ್ಗೆ ಒಂದು ಚಾನೆಲ್‌ನಲ್ಲಿ  ಒಂದು ರೀತಿ ಪ್ರಸಾರವಾಗುತ್ತಿದ್ದರೆ, ಮತ್ತೊಂದು ಚಾನೆಲ್‌ನಲ್ಲಿ ಆ ಸುದ್ದಿಯನ್ನು ಬೇರೆ ರೀತಿಯಲ್ಲೇ ತೋರಿಸಲಾಗುತ್ತಿದೆ. ನಾವು ಯಾವುದನ್ನು ನಂಬಬೇಕು ಎಂದು ಪ್ರಶ್ನಿಸಿದರು.

ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ನನ್ನ ಹೇಳಿಕೆ ಏನ್ ಪ್ರಯೋಜನ ಬೀಳಲ್ಲ. ಆದರೆ ದರ್ಶನ್ ಒಬ್ಬ ಸೆಲೆಬ್ರಿಟಿ ಅಂತ ನೋಡದೆ ಪೊಲೀಸ್ ಇಲಾಖೆ ತನಿಖೆ ನಡೆಸಿದೆ.  ಈ ಪ್ರಕರಣದಲ್ಲಿ ದರ್ಶನ್ ಆಚೆ ಬಂದರೆ ಖುಷಿಯಾಗುತ್ತದೆ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ